ಬೆಳ್ತಂಗಡಿ: ಗರ್ಡಾಡಿ ಗ್ರಾಮದ ಉಳ್ಳಿoಜ ನಿವಾಸಿ ಪಾರ್ವತಿ ಭಟ್ (61) ಅಲ್ಪಕಾಲದ ಅನಾರೋಗ್ಯದಿಂದ ಜು. 28ರಂದು ಸ್ವಗೃಹದಲ್ಲಿ ನಿಧನರಾದರು.
ವೇಣೂರು ಮಹಿಳಾ ಮಂಡಳಿ ಅಧ್ಯಕ್ಷರಾಗಿ ಉತ್ತಮ ಸೇವೆ ನೀಡಿದ್ದರು. ಉತ್ತಮ ಸಂಘಟಕರಾಗಿದ್ದ ಇವರು ವಧುವಿನ ಶೃಂಗಾರ, ಕುಸುರಿ ಕಲೆ, ಹೂಮಾಲೆ ಕಟ್ಟುವುದು, ತೋರಣ ಕಟ್ಟುವುದು, ಶೃಂಗಾರದ ಆಭರಣಗಳ ತಯಾರಿಯಲ್ಲಿ ಪರಿಣತರಾಗಿ ಚಿರಪರಿಚಿತರಾಗಿದ್ದರು.
ಮೃತರು ಪತಿ, ಇಬ್ಬರು ಪುತ್ರರು ಮತ್ತು ಪುತ್ರ, ಕುಟುಂಬ ವರ್ಗದವರನ್ನು ಅಗಲಿದ್ದಾರೆ.











