ಬೆಳ್ತಂಗಡಿ: ಬೆಂಗಳೂರು ನಗರದ, ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಉಡುಪಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರ ಮತ್ತು ಶ್ರೀ ಶೀರೂರು ಮಠದ ಭಾವೀ ಪರ್ಯಾಯ ಪೀಠಾಧೀಪತಿಗಳಾದ ಶ್ರೀ ವೇದವರ್ಧನ ಶ್ರೀಪಾದಂಗಳವರ ಜಾತುರ್ಮಾಸ್ಯ ಸಮಾರೋಪ ಸಮಾರಂಭದಲ್ಲಿ ವಿದ್ಯಾಪೀಠದ ಮೂಲ ಸೌಕರ್ಯ ನಿಧಿಗಾಗಿ ರೂ.25 ಕೋಟಿ ಸಂಗ್ರಹಣೆಗಾಗಿ ಅತ್ಯಪೂರ್ಶವಾದ ” ಹನಿ ಕೂಡಿ ಹಳ್ಳ ” ಯೋಜನೆಯನ್ನು ರೂಪಿಸಿದ ಬಗ್ಗೆ ತೆಂಕಕಾರಂದೂರು ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೆಸರಾದ ಕೃಷ್ಣ ಸಂಪಿಗೆತ್ತಾಯರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪೇಜಾವರ ಶ್ರೀಗಳು, ಶೀರೂರು ಶ್ರೀಗಳು, ಹೈಕೋರ್ಟ್ ನ್ಯಾಯಾಧೀಶ ರಾಜೇಶ್ ರೈ, ಆನಂದ ಬಳಗದ ಅಧ್ಯಕ್ಷ ರಾಮಚಂದ್ರ ಉಪಾಧ್ಯಾಯ, ಖ್ಯಾತ ಅಡ್ವೊಕೇಟ್ ಹಾರನಹಳ್ಳಿ ಅಶೋಕ್,ಖ್ಯಾತ ಪ್ರವಚನಕಾರ ಬೆ.ನ. ವಿಜಯೇಂದ್ರ ಆಚಾರ್ಯ ಉಪಸ್ಥಿತರಿದ್ದರು.











