ಬೆಳ್ತಂಗಡಿ : ಬುರುಡೆ ಪ್ರಕರಣದಲ್ಲಿ ಚಿನ್ನಯ್ಯನ ತಪ್ಪೋಪ್ಪಿಗೆ ಹೇಳಿಕೆ ನೀಡಲು ಬೆಳ್ತಂಗಡಿ ಕೋರ್ಟ್ ಗೆ ಹಾಜರುಪಡಿಸಿದ್ದು. ಚಿನ್ನಯ್ಯನ ಹೇಳಿಕೆ ನೀಡುವ ಬಗ್ಗೆ ನ್ಯಾಯಾಧೀಶರ ಪ್ರಶ್ನೆಗೆ ಕೇಳಿದ್ದು ಅದಕ್ಕೆ ತಪ್ಪೋಪ್ಪಿಗೆ ಹೇಳಿಕೆ ಕೊಡುತ್ತೇನೆ ಎಂದು ಹೇಳಿದ್ದಾನೆ. ಅದರಂತೆ ಮುಂದಿನ ದಿನಾಂಕ ನೀಡಿದ್ದು ಅಂದು ತಪ್ಪೋಪ್ಪಿಗೆ ನೀಡಲಿದ್ದಾನೆ.

ನಂತರ ವಾಪಸ್ ಶಿವಮೊಗ್ಗ ಜೈಲಿಗೆ ಭದ್ರತೆಯಲ್ಲಿ ಪ್ರಯಾಣ ಬೆಳೆಸಿದ್ದಾರೆ. ಬೆಳ್ತಂಗಡಿ ನ್ಯಾಯಾಲಯದಲ್ಲಿ ಸೆ.18 ರಂದು ಸಂಜೆ 3 ಗಂಟೆಗೆ ಚಿನ್ನಯ್ಯ ನ್ಯಾಯಾಧೀಶರ ಮುಂದೆ BNSS 183 ಹೇಳಿಕೆ ನೀಡಲು ಒಪ್ಪಿಗೆ ಇದೆಯಾ ಎಂದು ನ್ಯಾಯಾಧೀಶರು ಕೇಳಿದಾಗ ನೀಡುವುದಾಗಿ ಹೇಳಿದ್ದು ಅದರಂತೆ ಮುಂದಿನ ಸೆ.23 ರಂದು ಹೇಳಿಕೆ ದಾಖಲು ಕಾಲಾವಕಾಶ ನೀಡದ್ದು ಅದರಂತೆ 23 ರಂದು ಹಾಜರುಪಡಿಸಿ ಹೇಳಿಕೆ ನೀಡಲಿರುವ ಆರೋಪಿ ಚಿನ್ನಯ್ಯ.ಸಂಜೆ 5:15 ಕ್ಕೆ ವಾಪಸ್ ಜೈಲಿಗೆ ಕರೆದುಕೊಂಡು ಹೋಗಿದ್ದಾರೆ.











