
ಉಜಿರೆ: ಇಲ್ಲಿನ ಎಸ್.ಡಿ.ಎಂ ಆಸ್ಪತ್ರೆಯ ಎದುರು ನೂತನವಾಗಿ ಪ್ರಾರಂಭಗೊಂಡ ಗಣೇಶ್ ಮಲ್ಟಿ ಬ್ರಾಂಡ್ ಟಯರ್ & ಗ್ಯಾರೇಜ್ ಇದರ ಶುಭಾರಂಭವು ಅ. 1ರಂದು ನಡೆಯಿತು.
ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಕೋರಿದರು.

ಈ ಸಂದರ್ಭದಲ್ಲಿ ಉಜಿರೆ ಎಸ್.ಎಲ್.ವಿ ನವರತ್ನ,ಉಜಿರೆ ಗ್ರಾ.ಪಂ ಉಪಾಧ್ಯಕ್ಷ ರವಿ ಕುಮಾರ್ ಬರಮೇಲು,ಇಂಜಿನಿಯರ್ ಗಣೇಶ್ ಬೆನಕ,ಉದ್ಯಮಿಗಳಾದ ರವಿ ಚಕ್ಕಿತ್ತಾಯ,ಅಜಯ್ ಉದಯ ಚಿಕನ್, ಪ್ರಕಾಶ್ ಅಪ್ರಮೆಯ,ರಾಮಣ್ಣ ಗೌಡ ಉಜಿರೆ ಹಾಗೂ ಇತರರು ಉಪಸ್ಥಿತರಿದ್ದು ಸದುಭಾಶಯ ತಿಳಿಸಿದರು.
ಆಗಮಿಸಿದ ಅತಿಥಿ ಗಣ್ಯರನ್ನು ಸಂಸ್ಥೆಯ ಮಾಲಕರಾದ ಪ್ರವೀಣ್- ಜ್ಯೋತಿ ದಂಪತಿ,ಪುತ್ರ ವಿಶ್ರುತ್ ಹಾಗೂ ಸಂಜೀವ ಆಚಾರ್ಯ ಅವರು ಸ್ವಾಗತಿಸಿ, ಸತ್ಕರಿಸಿದರು.
ರವೀಂದ್ರ ಶೆಟ್ಟಿ ಬಳಂಜ ಸುರುಭಿ ಉಜಿರೆ ಅವರು ಸ್ವಾಗತಿಸಿ, ವಂದಿಸಿದರು.











