ಬೆಳ್ತಂಗಡಿ : ಚರ್ಚ್ ಅಂಗನವಾಡಿ ಕೇಂದ್ರದಲ್ಲಿ ಗಾಂಧಿ ಜಯಂತಿ ಆಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಪುಟಾಣಿಗಳ ಪ್ರಾರ್ಥನೆ ಯೊಂದಿಗೆ ಆರಂಭಿಸಿ, ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ನಗರ ಪಂಚಾಯತ್ ಸ್ಥಾಯಿ ಸಮಿತಿಯ ಅಧ್ಯಕ್ಷ ಶರತ್, ವೀಣಾವಿನೋದ್ , ಶಿಕ್ಷಕಿಯರಾದ ಅಕ್ಷತಾ, ಪದ್ಮಲತಾ, ಸಮಿತಿಯ ಸದಸ್ಯರಾದ ವಿಘ್ನೇಶ್, ಸ್ತ್ರೀ ಶಕ್ತಿ ಸದಸ್ಯರಾದ ವೀಣಾ, ಪ್ರತೀಮಾ, ಮೀನಾಕ್ಷಿ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಉಷಾ ಶ್ರೀನಿವಾಸ್, ಅಂ. ಸಹಾಯಕಿ ಪುಷ್ಪಾವತಿ, ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.











