
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ನಿವಾಸಿ ಅರುಣ್ ಜಿ. ಡಿ.ಸೋಜ ಅವರು ಮಂಡಿಸಿದ ” ಕಾರ್ಪೋರೇಟ್ ಆಡಳಿತ ಮತ್ತು ಮಾಹಿತಿ ಅಸಮಾನತೆ, ಭಾರತೀಯ ಕಂಪನಿಗಳ ಅಧ್ಯಯನ” ಎಂಬ ಪ್ರಬಂಧಕ್ಕೆ ರಾಜಸ್ತಾನ ಜೈಪುರ ಮಾಳವೀಯ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಪಿಹೆಚ್ ಡಿ ಪದವಿ ನೀಡಿ ಗೌರವಿಸಿದೆ.
ಅರುಣ್ ಜಿ. ಡಿ.ಸೋಜ ಅವರು ಡಾ. ಶ್ರೀ ದೇವ್ ದೇವ್ ಜಿ., ಎಂ.ಎನ್. ಐ.ಟಿ ಜೈಪುರ್ ಇವರ ಮಾರ್ಗದರ್ಶನದಲ್ಲಿ ಡಾ. ಕೃಷ್ಣ ಪ್ರಸಾದ್ ಟಿ.ಎ.ಪಿ.ಎಂ.ಐ ಮಣಿಪಾಲ್ ಇವರ ಸಹ ಮಾಗ೯ದಶ೯ನದಲ್ಲಿ ಈ ಪ್ರಬಂಧವನ್ನು ಮಂಡಿಸಿದ್ದರು.
ಅರುಣ್ ಜಿ. ಡಿ.ಸೋಜ ಅವರು ಜಸ್ಟೀಸ್ ಕೆ.ಎಸ್.ಹೆಗ್ಡೆ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಿಟ್ಟೆಯಲ್ಲಿ ಉದ್ಯೋಗದಲ್ಲಿದ್ದು, ನಡ ಗ್ರಾಮದ ಗ್ರೆಗೋರಿ ಡಿ.ಸೋಜ ಮತ್ತು ದಿ. ಎಮಿಲ್ಡ ಡಿ.ಸೋಜ ಅವರ ಪುತ್ರ.






