March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಡಾ. ರೋಹನ್ ದೀಕ್ಷಿತ್ ರೋಟರೀ ಕ್ಲಬ್ ಸದಸ್ಯರಾಗಿ ಪದಗ್ರಹಣ

ಉಜಿರೆ ಎಸ್.ಡಿ.ಎಮ್ ಆಸ್ಪತ್ರೆಯಲ್ಲಿ ಇಎನ್ ಟಿ ಸರ್ಜನ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ರೋಹನ್ ದೀಕ್ಷಿತ್ ರವರು ಅ.12 ರಂದು ರೋಟರಿ ಕ್ಲಬ್ ಬೆಳ್ತಂಗಡಿಯ ಸದಸ್ಯರಾಗಿ ಸೇರಿದರು.

ಮುಂದಿನ ವರ್ಷದ ಅಸಿಸ್ಟೆಂಟ್ ಗವರ್ನರ್ ರೋ. ಡಾ. ಶಶಿಧರ್ ಡೋಂಗ್ರೆಯವರು ಈ ಪದಗ್ರಹಣ ಕಾರ್ಯಕ್ರಮ ನಿರ್ವಹಿಸಿ ಶುಭ ಹಾರೈಸಿದರು.
ಕೋಶಾಧಿಕಾರಿ ರೋ| ನಾರಾಯಣ ಪೈಯವರು, ತಮ್ಮ ಜನ್ಮ ದಿನದ ಪ್ರಯುಕ್ತ ಏರ್ಪಡಿಸಿದ್ದ ಭವ್ಯ ಕುಟುಂಬ ಸಮ್ಮಿಲನ ಕಾರ್ಯಕ್ರಮದ ಪ್ರಾರಂಭದಲ್ಲಿ, ಆ್ಯನ್ ಗೀತಾ ಪ್ರಕಾಶ ಪ್ರಭುರವರು ಪ್ರಾರ್ಥನೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರೋ. ಪ್ರೊ.ಪ್ರಕಾಶ ಪ್ರಭುಗಳು ಸ್ವಾಗತಿಸಿದರು. ಎಸ್.ಡಿ.ಎಂ ಆಸ್ಪತ್ರೆಯ ಚೀಫ್ ಮೆಡಿಕಲ್ ಆಫೀಸರ್ ಡಾ ಸಾತ್ವಿಕರವರು ಡಾ.ರೋಹನ ದೀಕ್ಷಿತರನ್ನು ಸಭೆಗೆ ಪರಿಚಯಿಸಿದರು. ಡಾ.ರೋಹನ್ ರವರು ತಮಗೆ ಇಂತಹ ಅಂತರಾಷ್ಟ್ರೀಯ ಸೇವಾ ಸಂಸ್ಥೆಯ ಸದಸ್ಯತ್ವವನ್ನು ನೀಡಿದುದಕ್ಕಾಗಿ ಧನ್ಯವಾದ ಸಲ್ಲಿಸಿದರು.

ಡಾ. ಎಂ.ಎಂ ದಯಾಕರರು ಧನ್ಯವಾದವಿತ್ತರು. ರೋಟರಿ ಹಿರಿಯ ಸದಸ್ಯರಾದ ಪುಂಡಲೀಕ ಭಟ್, ಡಾ. ನಿಖಿತ, ರೋಟರೀ ಸದಸ್ಯರು, ಆ್ಯನ್ಸ್ ಗಳು, ಆ್ಯನೆಟ್ಗಳು ಭಾಗವಹಿಸಿದರು.

ಡಾ. ಅಂಕಿತಾ ಭಟ್, ಗೀತಾ ಪ್ರಭು,ಲಿಲ್ಲಿ ಆ್ಯಂಟೋನಿ,ಸುಜಾತ ಅಣ್ಣಿ ಪೂಜಾರಿ, ವೀಣಾ ಮಯ್ಯ, ಡಾ ಶ್ರೀಹರಿ ಮತ್ತು ಪ್ರೊ. ಪ್ರಕಾಶ ಪ್ರಭು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.

Related posts

ಕೊಕ್ರಾಡಿ ಪ್ರೌಢಶಾಲೆಯ ಶಿಕ್ಷಕಿ ಶ್ರೀಮತಿ ಅಕ್ಕಮ್ಮ ರವರಿಗೆ ಶಿಕ್ಷಣ ರತ್ನ ಪ್ರಶಸ್ತಿ ಗೌರವ

Suddi Udaya

ಬಳ್ಳಮಂಜ ಅನಂತೇಶ್ವರ ಸ್ವಾಮಿ ಶೇಷ-ನಾಗ ಜೋಡುಕರೆ ಕಂಬಳದ ಉದ್ಘಾಟನೆ

Suddi Udaya

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ: ಮಹಾ ರಥೋತ್ಸವ, ತೆಪ್ಪೋತ್ಸವ

Suddi Udaya

ಕರಾಟೆ ಸ್ಪರ್ಧೆ: ಗುರುವಾಯನಕೆರೆ ಸ.ಪ್ರೌ. ಶಾಲೆಯ ಮಹಮ್ಮದ್ ಶಹರಾನ್ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಭಗವದ್ಗೀತಾ ಸ್ಪರ್ಧೆ: ಉಜಿರೆ ಎಸ್ ಡಿ ಎಂ ಆಂಗ್ಲ ಮಾಧ್ಯಮ ರಾಜ್ಯ ಪಠ್ಯಕ್ರಮ ಶಾಲೆಯ ವಿದ್ಯಾರ್ಥಿನಿ ಅದ್ವಿತಿ ರಾವ್ ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ಕಾಯರಡ್ಕ ನಿವಾಸಿ ಮೋಹನ್ ನಾಯಕ್ ನಿಧನ

Suddi Udaya
error: Content is protected !!