ಬೆಳ್ತಂಗಡಿ ಸಿಎ ಬ್ಯಾಂಕ್ ನ ನೂತನ ಮೀಟಿಂಗ್ ಹಾಲ್ ನವೀಕರಿಸಿ ಉದ್ಘಾಟನೆಗೊಂಡು ನಿರ್ದೇಶಕರುಗಳ ಮಾಸಿಕ ಸಭೆಯನ್ನು ನಡೆಸಲಾಯಿತು.
ಬೆಳ್ತಂಗಡಿಯ ಕೋರ್ಟ್ ರಸ್ತೆಯ ಬಳಿ ಇರುವ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘ ಬೆಳ್ತಂಗಡಿ ಇಲ್ಲಿ ಬೆಳಗ್ಗೆ ವೈದಿಕ ಕಾರ್ಯಕ್ರಮಗಳನ್ನು ಪೂರೈಸಿ, ತಿಂಗಳ ಆಡಳಿತ ಮಂಡಳಿಯ ಸಭೆಯನ್ನು ಕೈಗೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷ ಅಜಿತ್ ಕುಮಾರ್ ಆರಿಗ, ಉಪಾಧ್ಯಕ್ಷ ಗಣೇಶ್ ಭಂಡಾರಿ , ಸಂಘದ ನಿರ್ದೇಶಕರುಗಳಾದ ಶ್ರೀನಾಥ್ ಕೆ ಎಂ, ಅಶೋಕ್ ರೈಪುಂಡಿಕು, ಮುನಿರಾಜ ಅಜ್ರಿ, ನಾರಾಯಣ ಆಚಾರ್ಯ, ಪುರಂದರ, ಶ್ರೀಮತಿ ಪ್ರೇಮ ಶ್ರೀಮತಿ ರಾಧ, ಹರಿಯಪ್ಪ ನಾಯ್ಕ. ತಿಮ್ಮಯ್ಯ ನಾಯಕ ರಮೇಶ . ಹಾಗೂ ಸಂಘದ ಮುಖ್ಯ ಕಾರ್ಯನಿರ್ವಣಾಧಿಕಾರಿ ಪ್ರಸಾದ್ ಹಾಗೂ ಡಿಸಿಸಿ ಬ್ಯಾಂಕ್ ನ ಸಲಹೆಗಾರ ಸುದರ್ಶನ್ ಉಪಸ್ಥಿತರಿದ್ದರು.











