ಧರ್ಮಸ್ಥಳ: ಅಯೋಧ್ಯೆ ಶ್ರೀರಾಮಮಂದಿರ ನಿರ್ಮಾಣದ ಉಸ್ತುವಾರಿಗಳು, ವಿಶ್ವಹಿಂದೂ ಪರಿಷದ್ ನ ಕೇಂದ್ರೀಯ ಸಮಿತಿ ಜಂಟೀ ಮಹಾ ಪ್ರಧಾನ ಕಾರ್ಯದರ್ಶಿ ಗೋಪಾಲ್ ಜೀ ಯವರು ನ.30ರಂದು ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವರ ದರ್ಶನ ಪಡೆದು ನಂತರ ಧರ್ಮಾಧಿಕಾರಿವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ನ ಪ್ರಮುಖರಾದ ಶರಣ್ ಪಂಪ್ವೆಲ್, ಎಂ.ಬಿ.ಪುರಾಣಿಕ್, ಗಿರಿಪ್ರಕಾಶ್ ತಂತ್ರಿಗಳು, ಡಾ.ಕೃಷ್ಣ ಪ್ರಸನ್ನ, ಪದ್ಮನಾಭ ವಿಟ್ಲ, ನವೀನ್ ನೆರಿಯ, ಗಣೇಶ್ ಕಳೆಂಜ, ರಮೇಶ್ ಧರ್ಮಸ್ಥಳ, ನಾಗೇಶ್ ಕಲ್ಮಂಜ, ರಾಘವೇಂದ್ರ ಗೌಡ ಊಂಕ್ರೊಟ್ಟು ಉಪಸ್ಥಿತರಿದ್ದರು.











