March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಹೊಸಂಗಡಿ: ಶ್ರೀ ದೈವ ಶ್ರೀ ಕೊಡಮಣಿತ್ತಾಯ ಹಾಗೂ ಪರಿವಾರ ದೈವಗಳ ಪುನಃಪ್ರತಿಷ್ಠಾ ಕಲಶಾಭಿಷೇಕ ಪರ್ವಸೇವೆ ಮತ್ತು ದೊಂಪದ ಬಲಿ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಹೊಸಂಗಡಿ: ಶ್ರೀ ದೈವ ಶ್ರೀ ಕೊಡಮಣಿತ್ತಾಯ ಹಾಗೂ ಕಲ್ಕುಡ ಕಲ್ಲುರ್ಟಿ , ಕಾಳಮ್ಮ ದೈವಗಳ ಪುನಃಪ್ರತಿಷ್ಠಾ ಕಲಶಾಭಿಷೇಕ ಪರ್ವಸೇವೆ ಮತ್ತು ದೊಂಪದ ಬಲಿ ನೇಮೋತ್ಸವವು ಜ.9ರಿಂದ 10ರವರೆಗೆ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಡಿ.28 ರಂದು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಜಿನರಾಜ್ ಜೈನ್ ಪದ್ಮಾಂಬ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಪ್ರಸನ್ನ ಆರ್ ಹೆಗ್ಡೆ ರಾಜ್ಯಗುತ್ತು ಪೆರಿಂಜೆ, ಸನ್ಮತ್ ಕುಮಾರ್ ಸೇಮಿತ ಪೆರಿಂಜೆ , ಮೂಡುಕೋಡಿ ಗುತ್ತು ಶಿಕ್ಷಕ ಮಹಾವೀರ ಜೈನ್, ಬಾಲ್ಯ ಶಂಕರ ಭಟ್, ಶ್ರೀಪತಿ ಭಟ್, ಜೀರ್ಣೋದ್ಧಾರ ಕೆಲಸಗಳಿಗೆ ವಿಶೇಷವಾಗಿ ಧನಸಹಾಯವನ್ನು ನೀಡಿದ ವಿನೂತನ ಗಿರೀಶ ಪೂಜಾರಿ, ಮೂಡುಕೋಡಿಯ 5 ಗ್ರಾಮಗಳ ಗುತ್ತು ಬರ್ಕೆಯವರು, ಗ್ರಾಮಸ್ಥರು, ಜೀರ್ಣೋದ್ಧಾರ ಸಮಿತಿಯ ಸದಸ್ಯರು ಭಾಗವಹಿಸಿದರು.

ಮಹಾವೀರ ಜೈನ್ ಸ್ವಾಗತಿಸಿ, ಸತೀಶ್ ಕಾರ್ಯಕ್ರಮ ನಿರೂಪಿಸಿ, ದಿನೇಶ್ ವಂದಿಸಿದರು.

Related posts

ಕಸ್ತೂರಿ ರಂಗನ್ ವರದಿ ವಿರುದ್ಧದ ಬೃಹತ್ ಪ್ರತಿಭಟನೆಯ ಪೂರ್ವಭಾವಿ ಸಭೆ

Suddi Udaya

ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸುವರ್ಣ ಮಹೋತ್ಸವ: ಸವಿ ನೆನಪಿನ ಕೇಂದ್ರ ಕಚೇರಿಯ ನೂತನ ಕಟ್ಟಡ ‘ಪರಿಶ್ರಮ’ ಲೋಕಾರ್ಪಣೆ

Suddi Udaya

ನಾಲ್ಕೂರು ನಿವಾಸಿ ಬಾಬು ನಿಧನ

Suddi Udaya

ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯ ವೈದಾಧಿಕಾರಿ ಡಾ. ಚಂದ್ರಕಾಂತ್ ವರ್ಗಾವಣೆ

Suddi Udaya

ಉಜಿರೆ : ಶ್ರೀ.ಧ.ಮಂ. ವಸತಿ ಪ.ಪೂ. ಕಾಲೇಜಿನಲ್ಲಿ ‘ವಿದ್ಯಾರ್ಥಿ ಸಂಸತ್ತು ಪದಗ್ರಹಣ’

Suddi Udaya

ಹತ್ಯಡ್ಕ: ನಿವೃತ್ತ ಎ.ಎಸ್.ಐ ಕೆ.ಎಸ್. ಬಾಬು ನಿಧನ

Suddi Udaya
error: Content is protected !!