ಬೆಳ್ತಂಗಡಿ, ಜ 18:- ಮಾರ್ನಿಂಗ್ ಕ್ರಿಕೇಟರ್ಸ್ ಬೆಳ್ತಂಗಡಿ ವತಿಯಿಂದ ಅಂಡರ್ ಆಮ್೯ ಹೊನಲು ಬೆಳಕಿನ ಕ್ರಿಕೇಟ್ ಪಂದ್ಯಾಟ ಬೆಳ್ತಂಗಡಿ ತಾಲೂಕು ಕ್ರೀಡಾಂಗಣದಲ್ಲಿ ಹನೀಪ್ ವರ್ಷಾರವರ ನೇತ್ರತ್ವದಲ್ಲಿ ಶನಿವಾರ ನಡೆಯಿತು.

ಪಂದ್ಯಾಟದಲ್ಲಿ 80ರ ದಶಕದಲ್ಲಿ ಆಡುತ್ತಿದ್ದ ತಾಲೂಕಿನ ಹಿರಿಯ ಆಟಗಾರರಾದ ವಿಕ್ರಮ್ ತಂಡದ ದೇವಿ ಪ್ರಸಾದ್, ವೆಲ್ಕಂ ಮದ್ದಡ್ಕ ತಂಡದ ಚಂದ್ರ ಹಾಸ, ಜಿ.ಸಿ.ಬಾಯ್ಸ್ ಗುರುವಾಯನಕೆರೆ ತಂಡದ ಗೋಪಿನಾಥ್ ನಾಯಕ್, ದಾಂದಳೆ ಅಳದಂಗಡಿ ತಂಡದ ಪ್ರದೀಪ್, ಶ್ರೀ ರಾಮ ಉಜಿರೆ ತಂಡದ ಸ್ಟೇನಿ ಜಯಕರ್,ಡೈಮಂಡ್ ತಂಡದ ದಿನೇಶ್ ಬೆಳ್ತಂಗಡಿ, ಅಜೇಯ ತಂಡದ ಬಾನು ಪ್ರಕಾಶ್, ಬ್ಲೂ ಡೈಮಂಡ್ ತಂಡದ ವಿಜಯ್ ಕುಮಾರ್, ರಿಲಯನ್ಸ್ ಪುಂಜಲ್ ಕಟ್ಟೆ ತಂಡದ ಶ್ರೀನಾಥ್ ಹಾಗೂ ಯೆಂಗ್ ಚಾಲೆಂಜರ್ಸ್ ಮುಂಡಾಜೆ ತಂಡದ ನಾಮ್ ದೇವ್ ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ದೇವಿ ಪ್ರಸಾದ್ ಮಾತನಾಡಿ ಹಳೆಯ ನೆನಪು ಮೆಲುಕು ಹಾಕಿದರು. ಕ್ರೀಡಾಕೂಟದ ಎಲ್ಲಾ ವ್ಯವಸ್ಥಾಪಕರಾಗಿ ಅಕ್ಬರ್ ಬೆಳ್ತಂಗಡಿ, ಪ್ರಸಾದ್ ಪಣಿಕ್ಕರ್, ಇಸ್ಮಾಲಿ ಐ.ಬಿ. ಅಬ್ಬಾಸ್ ಸಂಜಯನಗರ ವಹಿಸಿದ್ದರು.







