37.9 C
ಪುತ್ತೂರು, ಬೆಳ್ತಂಗಡಿ
March 6, 2026
ಕ್ರೀಡಾ ಸುದ್ದಿ

ಮಾರ್ನಿಂಗ್ ಕ್ರಿಕೇಟರ್ಸ್ ಬೆಳ್ತಂಗಡಿ ವತಿಯಿಂದ ಹೊನಲು ಬೆಳಕಿನ ಕ್ರಿಕೇಟ್ ಪಂದ್ಯಾಟ

ಬೆಳ್ತಂಗಡಿ, ಜ 18:- ಮಾರ್ನಿಂಗ್ ಕ್ರಿಕೇಟರ್ಸ್ ಬೆಳ್ತಂಗಡಿ ವತಿಯಿಂದ ಅಂಡರ್ ಆಮ್೯ ಹೊನಲು ಬೆಳಕಿನ ಕ್ರಿಕೇಟ್ ಪಂದ್ಯಾಟ ಬೆಳ್ತಂಗಡಿ ತಾಲೂಕು ಕ್ರೀಡಾಂಗಣದಲ್ಲಿ ಹನೀಪ್ ವರ್ಷಾರವರ ನೇತ್ರತ್ವದಲ್ಲಿ ಶನಿವಾರ ನಡೆಯಿತು.

    ಪಂದ್ಯಾಟದಲ್ಲಿ 80ರ ದಶಕದಲ್ಲಿ ಆಡುತ್ತಿದ್ದ ತಾಲೂಕಿನ ಹಿರಿಯ ಆಟಗಾರರಾದ ವಿಕ್ರಮ್ ತಂಡದ ದೇವಿ ಪ್ರಸಾದ್, ವೆಲ್ಕಂ ಮದ್ದಡ್ಕ ತಂಡದ ಚಂದ್ರ ಹಾಸ, ಜಿ.ಸಿ.ಬಾಯ್ಸ್ ಗುರುವಾಯನಕೆರೆ ತಂಡದ ಗೋಪಿನಾಥ್ ನಾಯಕ್, ದಾಂದಳೆ ಅಳದಂಗಡಿ ತಂಡದ ಪ್ರದೀಪ್, ಶ್ರೀ ರಾಮ ಉಜಿರೆ ತಂಡದ ಸ್ಟೇನಿ ಜಯಕರ್,ಡೈಮಂಡ್ ತಂಡದ ದಿನೇಶ್ ಬೆಳ್ತಂಗಡಿ, ಅಜೇಯ ತಂಡದ ಬಾನು ಪ್ರಕಾಶ್, ಬ್ಲೂ ಡೈಮಂಡ್ ತಂಡದ ವಿಜಯ್ ಕುಮಾರ್, ರಿಲಯನ್ಸ್ ಪುಂಜಲ್ ಕಟ್ಟೆ ತಂಡದ ಶ್ರೀನಾಥ್ ಹಾಗೂ ಯೆಂಗ್ ಚಾಲೆಂಜರ್ಸ್ ಮುಂಡಾಜೆ ತಂಡದ ನಾಮ್ ದೇವ್ ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ದೇವಿ ಪ್ರಸಾದ್ ಮಾತನಾಡಿ ಹಳೆಯ ನೆನಪು ಮೆಲುಕು ಹಾಕಿದರು. ಕ್ರೀಡಾಕೂಟದ ಎಲ್ಲಾ ವ್ಯವಸ್ಥಾಪಕರಾಗಿ ಅಕ್ಬರ್ ಬೆಳ್ತಂಗಡಿ, ಪ್ರಸಾದ್ ಪಣಿಕ್ಕರ್, ಇಸ್ಮಾಲಿ ಐ.ಬಿ. ಅಬ್ಬಾಸ್ ಸಂಜಯನಗರ ವಹಿಸಿದ್ದರು.

Related posts

ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ: ಎಸ್ ಡಿ ಎಮ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಯಶಸ್ವಿ ದ್ವಿತೀಯ ಸ್ಥಾನ

Suddi Udaya

ಸಾವ್ಯ ಶುಭೋದಯ ಹಿಂದೂ ಸೇವಾ ಟ್ರಸ್ಟ್ ಹಾಗೂ ಜೆ ಜೆ ಫ್ರೆಂಡ್ಸ್ ವತಿಯಿಂದ ವಾಲಿಬಾಲ್ ಪಂದ್ಯಾಟ

Suddi Udaya

ಜೆಸಿಐ ಬೆಳ್ತಂಗಡಿಯಿಂದ ಜೆಜೆಸಿ ತ್ರಿಷಾರವರಿಗೆ ಗೌರವರ್ಪಣೆ

Suddi Udaya

ಕಬಡ್ಡಿ ಪಂದ್ಯಾಟ: ಬೆಳಾಲು ಶ್ರೀ.ಧ.ಮಂ. ಅನುದಾನಿತ ಪ್ರೌಢಶಾಲಾ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ

Suddi Udaya

ತಾಲೂಕು ಮಟ್ಟದ ಖೋ ಖೋ ಪಂದ್ಯಾಟ: ಅಳದಂಗಡಿ ಸರಕಾರಿ ಪ್ರೌಢಶಾಲಾ ಬಾಲಕರ ಹಾಗೂ ಬಾಲಕಿಯರ ತಂಡ ದ್ವಿತೀಯ

Suddi Udaya

ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕರ ಮ್ಯಾಟ್ ಕಬಡ್ಡಿ ಪಂದ್ಯಾಟ : ಹೊಸಂಗಡಿ ಇಂದಿರಾಗಾಂಧಿ ವಸತಿ ಶಾಲೆಗೆ ಪ್ರಶಸ್ತಿ

Suddi Udaya
error: Content is protected !!