ಮಲೆಬೆಟ್ಟು :ಹಿಂದೂ ಸಂಗಮ ಅಯೋಜನ ಸಮಿತಿ ಬೆಳ್ತಂಗಡಿ* , ಹಿಂದೂ ಸಂಗಮ ನಿರ್ವಹಣಾ ಸಮಿತಿ ಲಾಯಿಲ ಮಂಡಲ(ಕೊಯ್ಯೂರು ಮತ್ತು ಲಾಯಿಲ) ಫೆ 1ರಂದು ಮಲೆಬೆಟ್ಟು ಶ್ರೀ ವನದುರ್ಗ ದೇವಸ್ಥಾನದಲ್ಲಿ ನಡೆಯುವ ಹಿಂದೂ ಸಂಗಮಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಜ 16ರಂದು ಮಲೆಬೆಟ್ಟು ಶ್ರೀ ವನದುರ್ಗ ದೇವಸ್ಥಾನದಲ್ಲಿ ನಡೆಯಿತು

ಆಮಂತ್ರಣ ಪತ್ರಿಕೆಯನ್ನು ಹಿಂದೂ ಸಂಗಮ ತಾಲೂಕು ಆಯೋಜನ ಸಮಿತಿ ಸಂಯೋಜಕರಾದ ಶ್ರೀ ಅನಿಲ್ ಕುಮಾರ್. ಯು, ಜಯರಾಮ ಭಟ್ ಕೊರ್ಯರ್, ಚಂದ್ರಶೇಖರ ಆಚಾರ್ಯ ಕನ್ನಾಜೆ ಬಿಡುಗಡೆ ಗೊಳಿಸಿದರು ಈ ಸಂದರ್ಭದಲ್ಲಿ ಲಾಯಿಲ ಮಂಡಲ ಸಂಯೋಜಕರಾದ ಶ್ರೀ B.K ಧನಂಜಯ ರಾವ್ ದರ್ಪಿಂಜೆ, ಸಹ ಸಂಯೋಜಕರಾದ ಚಂದ್ರಶೇಖರ ಸಾಲಿಯನ್ ಕೊಯ್ಯೂರು, ಅಶೋಕ್ ಭಟ್ ಕೊಯ್ಯೂರು, ರಾಷ್ಟ್ರೀಯ ಸ್ವಯಂಸೇವಕ ಸಂಘ ಪುತ್ತೂರು ಜಿಲ್ಲಾ ಸೇವಾ ಪ್ರಮುಖ್ ವಿಜಯ್ ಅರಳಿ, ಬೆಳ್ತಂಗಡಿ ತಾಲೂಕು ಸಂಘ ಚಾಲಕರಾದ ಶ್ರೀಗಣೇಶ್ ಭಟ್ ಕಾಂತಾಜೆ, ತಾಲೂಕು ಆಯೋಜನಾ ಸಮಿತಿ ಪದಾಧಿಕಾರಿಗಳು, ಮಂಡಲ ನಿರ್ವಹಣಾ ತಂಡದ ಪ್ರಮುಖರು, ಮತ್ತು ಎರಡು ಗ್ರಾಮದ ಹಿಂದೂ ಬಂಧುಗಳು ಉಪಸ್ಥಿತರಿದ್ದರು












