March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜ.29 (ಇಂದು): ಬದ್ಯಾರಿನಲ್ಲಿ “ಹಿಬರೋಡಿ ಯಕ್ಷೋತ್ಸವ”‌ -“ಸಹಸ್ರ ಕವಚ ಮೋಕ್ಷ” ಯಕ್ಷಗಾನ ಬಯಲಾಟ”

ಬದ್ಯಾರು:ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಿಂದ ಶ್ರೀ ಮಂಜುನಾಥ ಸ್ವಾಮಿ ಹಾಗೂ ಶ್ರೀ ಮಹಾಗಣಪತಿ ದೇವರ ಸೇವಾರ್ಥ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ನಿರಂತರ ಸೇವಾ ಬಯಲಾಟ “ಸಹಸ್ರ ಕವಚ ಮೋಕ್ಷ” ತೆಂಕಕಾರಂದೂರಿನ ಬದ್ಯಾರಿನಲ್ಲಿರುವ ಹಿಬರೋಡಿ ಅನುಗ್ರಹ ನಿಲಯದ ವಠಾರದಲ್ಲಿ ಜ.29 ರಂದು ರಾತ್ರಿ ಗಂಟೆ 7ರಿಂದ ರಾತ್ರಿ 12ರ ತನಕ ಪ್ರದರ್ಶನಗೊಂಡು ಯಕ್ಷ ಕಲಾಪ್ರೇಮಿಗಳಿಗೆ ರಸದೌತಣ ನೀಡಲಿದೆ ಎಂದು ಸೇವಾಕರ್ತರು, ಬೆಳ್ತಂಗಡಿ ಲಯನ್ಸ್ ಕ್ಲಬ್ ನಿಕಟಪೂರ್ವಧ್ಯಕ್ಷ,ಯಕ್ಷಪ್ರೇಮಿ ದೇವದಾಸ್ ಶೆಟ್ಟಿ ಹಿಬರೋಡಿ ತಿಳಿಸಿರುತ್ತಾರೆ.

ಪ್ರತಿ ವರ್ಷ ನೂತನ ಪ್ರಸಂಗ:

ಇದೇ ಸ್ಥಳದಲ್ಲಿ 2004 ಮತ್ತು 2005ರಲ್ಲಿ ಕಟೀಲು ಮೇಳದ ಪ್ರಸಂಗಗಳನ್ನು ಪ್ರದರ್ಶಿಸುವುದರೊಂದಿಗೆ ಆರಂಭವಾದ ಕಲಾಪ್ರೇಮ ನಿರಂತರ ಬೆಳೆಯುತ್ತ ಬಂದಿದೆ. 2006ರಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಬಯಲಾಟದೊಂದಿಗೆ ಈ ಸೇವೆ ಮುಂದುವರೆದು ಪ್ರತಿ ವರ್ಷವೂ ಅದೇ ಮೇಳದ ನೂತನ ಪ್ರಸಂಗ ಪ್ರದರ್ಶನದ ಮೂಲಕ ಜನಮನ ರಂಜನೆಯನ್ನೂ ಮಾಡಿಕೊಂಡು ಬಂದಿದೆ. ಮಧ್ಯೆ ಒಂದು ವರ್ಷ ಧರ್ಮಸ್ಥಳ ಮತ್ತು ಕಟೀಲು ಮೇಳಗಳ ಪ್ರತ್ಯೇಕ ಪ್ರದರ್ಶನಗಳೂ ಆಗಿವೆ.

ನಿರಂತರ 22ವರ್ಷಗಳಿಂದ ಸೇವೆ:

ಕಳೆದ 22 ವರ್ಷಗಳಿಂದ ನಿರಂತರ ಯಕ್ಷಗಾನ ಸೇವೆ ನಡಿತೀದೆ. ಸಾವಿರಾರು ಕಲಾಸಕ್ತರಿಗೆ ಕಲಾರಂಜನೆಯ ಜೊತೆಗೆ ಆತಿಥ್ಯ ಸತ್ಕಾರದ ಮೂಲಕವೂ ಸಂತೃಪ್ತಿಯನ್ನು ನೀಡುತ್ತಿರುವುದು ಇಲ್ಲಿರುವ ವೈಶಿಷ್ಟ್ಯ.

Related posts

ಕಡಿರುದ್ಯಾವರ: ಅಕ್ರಮ ಮರಳು ಸಾಗಾಟಕ್ಕೆ ಯತ್ನ: ಬೆಳ್ತಂಗಡಿ ಪೊಲೀಸರಿಂದ ಇಬ್ಬರ ವಿರುದ್ಧ ಪ್ರಕರಣ ದಾಖಲು

Suddi Udaya

ಭಾರೀ ಮಳೆಗೆ ಕಾಯರ್ತಡ್ಕ ಮೈರಾರ್ ‍ನಲ್ಲಿ ಸೇತುವೆ ಮುಳುಗಡೆ

Suddi Udaya

ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಸಾಮೂಹಿಕ ವಿವಾಹ ನಿಶ್ಚಿತಾರ್ಥ

Suddi Udaya

ಚಾರ್ಮಾಡಿ: ಕುಡಿಯುವ ನೀರಿಗಾಗಿ ಪಂಚಾಯತ್ ಎದುರು ಜನರ ಪ್ರತಿಭಟನೆ: ತಕ್ಷಣ ಗ್ರಾ.ಪಂ. ನಿಂದ ಸ್ಪಂದನೆ

Suddi Udaya

ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ನಿಂದ ಚೈತನ್ಯ ವಿಮಾ ಚೆಕ್ ವಿತರಣೆ

Suddi Udaya

ಲಾಯಿಲ ಶ್ರೀ ರಾಘವೇಂದ್ರ ಮಠದ ಗೌರವ ಸಲಹೆಗಾರರಾಗಿ ಸುಮಂತ್ ಕುಮಾರ್ ಜೈನ್ ಆಯ್ಕೆ

Suddi Udaya
error: Content is protected !!