37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಪ್ರತಿಷ್ಠಿತ ಬಿಲ್ಲವ ಗುತ್ತು ಮನೆಯಲ್ಲಿ ಶ್ರೀ ಕ್ಷೇತ್ರ ಗೆಜ್ಜೆ ಗಿರಿಯ ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ತಂಗಡಿ : ಕರಾಯ ಗ್ರಾಮದ ಮುಗ್ಗ ಗುತ್ತು ಶ್ರೀ ದುರ್ಗಾಂಬಿಕಾ ದೇವಿಯ ವಾರ್ಷಿಕ ಪೂಜೆಯನ್ನು ಜ.28 ರಂದು ಮುಗ್ಗಗುತ್ತಿನಲ್ಲಿ ನವಕ ಪ್ರಧಾನ ಹೋಮ , ನಾಗತನುದ ತಂಬಿಲ, ವೆಂಕಟರಮಣ ದೇವರ ಮುಡಿಪು , ದೈವಗಳಿಗೆ ಪಂಚ ಪರ್ವ, ದೇವಿಗೆ ಸರ್ವಾಲಂಕಾರ ಪೂಜೆಯ ಬಳಿಕ ಆಡಳಿತ ಸಮಿತಿಯ ಸಭೆಯು ಜರಗಿ, ಡಾ ರಾಜಾರಾಮ್, ಚರಣ್, ಪ್ರಶಾಂತ್ ಬಂಗೇರ, ಹಾಗೂ ಕೀರ್ತಿ ಬಂಗೇರನ್ನು, ಸಮಿತಿಗೆ ಆಮಂತ್ರಿತರಾಗಿ ನೇಮಿಸಲಾಯಿತು.

ಈ ಸಂದರ್ಭದಲ್ಲಿ ಮೆಸ್ಕಾಂ ಅಧ್ಯಕ್ಷರಾಗಿ ಆಯ್ಕೆಯಾದ ಗುತ್ತಿನ ಅಧ್ಯಕ್ಷ ಕೆ ಹರೀಶ್ ಕುಮಾರ್ ಮತ್ತು ಗುರುದೇವ ವಿವಿದೋದ್ದೇಶ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಭಗೀರಥ ಜಿ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು.

ಗುತ್ತಿನ ಅಭಿವೃದ್ಧಿಯಲ್ಲಿ ಸಹಕರಿಸಿದ ಹೆರಾಜೆ ಕುಟುಂಬಸ್ಥರು, ಸರ್ವೆ ದೋಳ ಶ್ರೀಮತಿ ಅನ್ವಿತಾ ಪ್ರದೀಪ್ ಪೂಜಾರಿ, ಶ್ರೀಮತಿ ಕೀರ್ತನ ರಾಜೇಂದ್ರ ಪೂಜಾರಿ ಮೂಡಬಿದ್ರಿ ಇವರನ್ನು ಅಭಿನಂದಿಸಲಾಯಿತು.
ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಆಡಳಿತ ಮೊಕ್ತೇಸರ ಪೀತಾಂಬರ ಹೆರಾಜೆ, ಅಧ್ಯಕ್ಷ ಕೆ ಹರೀಶ್ ಕುಮಾರ್, ಉಪಾಧ್ಯಕ್ಷ ಎಂ ಜಗನ್ನಾಥ ಬಂಗೇರ, ಕಾರ್ಯದರ್ಶಿ ಭಗೀರಥ ಜಿ, ಜೊತೆ ಕಾರ್ಯದರ್ಶಿ ಸೋಮನಾಥ ಬಂಗೇರ, ಕೋಶಾಧಿಕಾರಿ ದಿನೇಶ್ ಪಿದಮ್ಮಲೆ, ಡಾ ರಾಜಾರಾಮ್ , ಕಮಲಾಕ್ಷ ಬೋಳಾರ, ಮಿತ್ರ ಹೆರಾಜೆ, ತುಕಾರಾಮ ಬಂಗೇರ, ನಾರಾಯಣ ಮಚ್ಚಿನ, ಹೇಮಾ ದಾಮೋದರ, ಶಾರದ ಕೃಷ್ಣ, ಜಾನಕಿ ಕೇಶವ, ನವೀನ್ ಬಂಗೇರ, ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ: ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೋಕುಲೆನ ಆಟಿ ದಿನ ಕಾರ್ಯಕ್ರಮ

Suddi Udaya

ಉಜಿರೆ ಅನುಗ್ರಹದಲ್ಲಿ ಪೂರ್ವ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪೋಷಕರ ಸಭೆ

Suddi Udaya

ಕೊಯ್ಯೂರು ಸ.ಪ.ಪೂ. ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ದಸರಾ ಕವಿಗೋಷ್ಠಿ-2025ರಲ್ಲಿ ವಸಂತಿ ಟಿ. ನಿಡ್ಲೆ

Suddi Udaya

ಸೇವಾಭಾರತಿಯಿಂದ ಈ ವರ್ಷದ “ಸೇವಾ ಶ್ರೇಷ್ಠ -2024” ಪುರಸ್ಕಾರ:

Suddi Udaya

ಮರೋಡಿ : 22 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮೊಸರು ಕುಡಿಕೆ ಉತ್ಸವ

Suddi Udaya
error: Content is protected !!