ವೇಣೂರು: ನಿಟ್ಟಡೆ ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ ಕಾಲೇಜಿನಲ್ಲಿ ಶಿಕ್ಷಣಕ್ಕೆ ಮಾತ್ರ ಪ್ರಾಶಸ್ತ್ಯ ತೆ ಯನ್ನು ನೀಡುವುದಲ್ಲದೆ, ಪಠ್ಯೇತರ ಚಟುವಟಿಕೆಗಳಿಗೆ ಮಹತ್ವವನ್ನು ನೀಡುತ್ತಾ ಬಂದಿದೆ. ಪಠ್ಯೇತರ ಚಟುವಟಿಕೆಗಳಾದ ಯೋಗ, ಕರಾಟೆ ಯಕ್ಷಗಾನ, ಸಂಗೀತ, ಡ್ಯಾನ್ಸ್ ಮುಂತಾದ ಚಟುವಟಿಕೆಗಳು ನಡೆಯುತ್ತಿದ್ದು ಈ ಶೈಕ್ಷಣಿಕ ವರ್ಷದ ಯೋಗ ತರಬೇತುದರಾದ ಸತೀಶ್ ಆಚಾರ್ಯ ತಮ್ಮ ಸ್ವ ಇಚ್ಛೆಯಿಂದ ಯೋಗ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿದರು.
ಯೋಗ ತರಗತಿಯಲ್ಲಿ ಪ್ರಥಮ ಬಹುಮಾನವನ್ನು ಆಯುಷ್ 6ನೇ ತರಗತಿ, ದ್ವಿತೀಯ ಮೂರನೇ ತರಗತಿಯ ಗ್ಯಾನ್ ವಿ ಶೆಟ್ಟಿ ತೃತೀಯ ಬಹುಮಾನವನ್ನು ನಾಲ್ಕನೇ ತರಗತಿಯ ಮಾಸ್ಟರ್ ಆರ್ಘ್ಯ ಪಿ ಎಸ್ ಕುಲಾಲ್ ಹಾಗೂ ಎಲ್ಲಾ ಯೋಗ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನವನ್ನು ವಿತರಿಸಿದರು.











