
ಮರೋಡಿ: ಶ್ರೀ ದೈವ ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳ ಗರಡಿ ತಾಳಿಪಾಡಿ ಪಲಾರಗೋಳಿ ಮರೋಡಿ ಗರಡಿಯ ಜಾತ್ರೋತ್ಸವ ಸಮಿತಿ ಅಧ್ಯಕ್ಷರಾಗಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಕೇತ್ರದ ಯುವ ಮುಂದಾಳು ರತ್ನಾಕರ ಬುಣ್ಣನ್ ಅವರು ಪುನರಾಯ್ಕೆಗೊಂಡಿದ್ದಾರೆ.
ಮಾ.1ರಂದು ನಡೆದ ಸಭೆಯಲ್ಲಿ ರತ್ನಾಕರ ಬುಣ್ಣನ್ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ನೇಮಿರಾಜ್ ಪಾಂಡಿ ಗುಡ್ಡನ್ ಬೆಟ್ಟು, ಉಪಾಧ್ಯಕ್ಷರುಗಳಾಗಿ ಜಾರಪ್ಪ ಪೂಜಾರಿ ಕುಮೇರು, ಸದಾನಂದ ಪೂಜಾರಿ ಸೌಭಾಗ್ಯ, ಪ್ರಧಾನ ಕಾರ್ಯದರ್ಶಿಯಾಗಿ ವಿನೋದರ ಸಾಲ್ಯಾನ್ ಕಲ್ಲಟ್ಟ, ಕಾರ್ಯದರ್ಶಿಗಳಾಗಿ ಸಂತೋಷ್ ಸಾಲ್ಯಾನ್ , ಉಮೇಶ್ ಸಲ್ಯಾನ್ ಕುಕ್ಯೆರಡ್ಡ, ಕೋಶಾಧಿಕಾರಿಯಾಗಿ ರವೀಂದ್ರ ಅಂಚನ್ ಅಟ್ಲಬೆಟ್ಟು ಆಯ್ಕೆಯಾದರು.
ಸದಸ್ಯರಾಗಿ ಜಯ ಸಾಲ್ಯಾನ್ ಹಾರ್ದಿತ್ತಿಲ್, ಜಯನಂದ ಸಾಲ್ಯಾನ್ ಹಾರ್ದಿತ್ತಿಲ್, ರೆಕ್ಕಯ್ಯ ಪೂಜಾರಿ ಕುಂಜಾಡಿ, ಅಮರನಾಥ್ ಪೂಜಾರಿ ಹಿಮರಡ್ಡ, ಹರಿಶ್ಚಂದ್ರ ಸಾಲ್ಯಾನ್ ಕಲ್ಲಟ್ಟ, ಜಗದೀಶ್ ಆಚಾರ್ಯ ಕೊಂಪೆ, ಕೃಷ್ಣಪ್ಪ ಪೂಜಾರಿ ಕೃತೇಶ್ ನಿಲಯ, ರಾಜೀವಿ ಕುಮೇರು, ಪ್ರೇಮ ಪಲಾರಗೋಳಿ, ಸುನಿತಾ ಪಲಾರಗೋಳಿ, ಮಂಜುಳಾ ಪಲಾರಗೋಳಿ, ಸುಜಾತ ಕುಂಜಾಡಿ, ಸುದಾಕ್ಷಿಣಿ ಹಿಮರಡ್ಡ ಆಯ್ಕೆಯಾಗಿದ್ದಾರೆ.











