ಕುತ್ಲೂರು:ಕುತ್ಲೂರು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರ ನೀಡಿ ಇದೀಗ ಈ ಭಾಗದ ಜನರ ಬಹುದಿನದ ಬೇಡಿಕೆಯಾದ ಕಾಡಬಾಗಿಲು ಸೇತುವೆ ನಿರ್ಮಾಣಕ್ಕೆ ಶಾಸಕ ಹರೀಶ್ ಪೂಂಜರವರು ಸುಮಾರು ರೂ 1.90ಲಕ್ಷ ಅನುದಾನ ಒದಗಿಸಿ ಮಾ 7ರಂದು ಶಿಲಾನ್ಯಾಸ ನೇರವೇರಿಸಿದರು.

ಈ ಸಂದರ್ಭದಲ್ಲಿ ನಾರಾವಿ ಸಿಎ ಬ್ಯಾಂಕ್ ಅಧ್ಯಕ್ಷ ಎನ್ ಸುಧಾಕರ ಭಂಡಾರಿ, ನಾರಾವಿ ಗ್ರಾ.ಪಂ ಮಾಜಿ ಅಧ್ಯಕ್ಷ ರಾಜವರ್ಮ ಜೈನ್ ನಾರಾವಿ, ಹಾ.ಉ ಸಂಘದ ಅಧ್ಯಕ್ಷೆ ರಾಜಶ್ರೀ, ಕುತ್ಲೂರು ಶಕ್ತಿಕೇಂದ್ರದ ಅಧ್ಯಕ್ಷ ರತ್ನಾಕರ ಪೂಜಾರಿ, ಜಿಲ್ಲಾ ಎಸ್.ಟಿ ಮೋರ್ಚಾದ ಪ್ರಕಾರ್ಯದರ್ಶಿ ಶ್ರೀಧರ ಗೌಡ, ನಾರಾವಿ ಪಂಚಾಯತ್ ಮಾಜಿ ಸದಸ್ಯ ಉದಯ ಹೆಗ್ಡೆ, ಬಿಲ್ಲವ ಸಂಘದ ಅಧ್ಯಕ್ಷ ಕೇಶವ ಪೂಜಾರಿ, ಹಿರಿಯರಾದ ಡಾಕಯ್ಯ ಪೂಜಾರಿ, ತುಂಗಪ್ಪ ಪೂಜಾರಿ, ಪ್ರಮುಖರಾದ ಸಂತೋಷ್ ಕುಮಾರ್ ಮರ್ದೋಟ್ಟು, ಆಶಾಲತಾ, ಸುಮಿತ್ರ ವಸಂತ ನಾರಾವಿ, ಸುದರ್ಶನ ಹೆಗ್ಡೆ, ಅಭಿಜಿತ್ ಜೈನ್, ಮೀನಾ, ನಾರಾಯಣ ಪೂಜಾರಿ, ಸರಿತಾ, ನಿರ್ದೇಶಕ ರಾಜೇಂದ್ರ ಜೈನ್, ಬೂತ್ ಸಮಿತಿ ಅಧ್ಯಕ್ಷ ಅಣ್ಣಿ ಎಂ.ಕೆ, ಪ್ರಕಾಶ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.












