25.6 C
ಪುತ್ತೂರು, ಬೆಳ್ತಂಗಡಿ
March 9, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಲೇಖಕಿ ಶ್ವೇತಾ ದಿಲೀಪ್ ರವರ ಕೃತಿ “ಜೀವನದ ಬೆಳಕು” ಪುಸ್ತಕ ಬಿಡುಗಡೆ

ಬೆಳ್ತಂಗಡಿ : ಲೇಖಕಿ ಶ್ರೀಮತಿ ಶ್ವೇತಾ ದಿಲೀಪ್ ಕುತ್ಲೂರು ನಾರಾವಿ ಇವರ ಚೊಚ್ಚಲ ಕೃತಿ ಜೀವನದ ಬೆಳಕು ಮಾ.8 ರಂದು ಬಿಡುಗಡೆಗೊಂಡಿತು.

ಪುತ್ತೂರು ವಿದ್ಯಾಮಾತ ಅಕಾಡೆಮಿ ಸಭಾಂಗಣದಲ್ಲಿ ನಡೆದ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಪುತ್ತೂರು ತಾಲೂಕು ಘಟಕದ ಪದಗ್ರಹಣ ಹಾಗೂ ಆಮಂತ್ರಣ ಟೀಮ್ ಗಾನಯಾನದ ಜೋಡಿಗಾಯನ ಸಮಾರಂಭದಲ್ಲಿ ಬಿಡುಗಡೆಗೊಂಡಿತು.

ಜೀವನದ ಬೆಳಕು ಕೃತಿಯನ್ನು ಹಿರಿಯ ಮುತ್ಸದ್ದಿ ಆಮಂತ್ರಣ ಗೌರವ ಸಲಹೆಗಾರರಾದ ಬಿ.ಭುಜಬಲಿ ಧರ್ಮಸ್ಥಳ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಲೇಖಕಿ ಶ್ವೇತಾ ದಿಲೀಪ್ ನಾರಾವಿ, ಸ್ವರ್ಣಲತಾ ವೀರೇಂದ್ರ ಕುಮಾರ್ ಕಾಯರ್ತಡ್ಕ, ಅಮ್ಮಾಜಿ ಬಿ.ಜೈನ್,
ದಿಲೀಪ್ ಕುಮಾರ್ ಜೈನ್, ಪೃಥ್ವಿರಾಜ್ ಜೈನ್ ಬೆಂಗಳೂರು,ಆದಿತ್ಯ ಜೈನ್ ಸಹಕರಿಸಿದರು.

ಸಮಾರಂಭದಲ್ಲಿ ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ ,ಆಮಂತ್ರಣ ದ.ಕ ಜಿಲ್ಲಾಧ್ಯಕ್ಷೆ ವಿಂಧ್ಯಾ ಎಸ್.ರೈ ಕಡೇಶಿವಾಲಯ,ಉಪಾಧ್ಯಕ್ಷೆ ಅನಿತಾ ಶೆಟ್ಟಿ ಮೂಡುಬಿದಿರೆ, ಉಡುಪಿ ಆಮಂತ್ರಣ ಜಿಲ್ಲಾಧ್ಯಕ್ಷೆ ಪುಷ್ಪಪ್ರಸಾದ್, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಉಮೇಶ್ ನಾಯಕ್, ಮಲ್ಲಿನಾಥ್ ಜೈನ್ ಧರ್ಮಸ್ಥಳ, ಪುತ್ತೂರು ಆಮಂತ್ರಣ ವೇದಿಕೆಯ ನೂತನ ಅಧ್ಯಕ್ಷರಾದ ಆಶಾಮಯ್ಯ, ಆಮಂತ್ರಣ ಸೇವಾ ಪ್ರತಿಷ್ಠಾನದ ಟ್ರಸ್ಟಿ ಅರುಣ್ ಅರುವ, ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಲೇಖಕಿಯ ಪರಿಚಯ ಮಾಡಿದರು.

Related posts

ಕೊಯ್ಯೂರು ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

Suddi Udaya

ಪೆರಿಂಜೆ ಮದರಸ ವಿದ್ಯಾರ್ಥಿಗಳಿಗೆ ಸಾಹಿತ್ಯ ಮತ್ತು ಕಲೋತ್ಸವ ಸ್ಪರ್ಧೆ

Suddi Udaya

ಮಡಂತ್ಯಾರು: ಚಾಲಕನ ನಿಯಂತ್ರಣ ತಪ್ಪಿ ಲಾರಿ ವಿದ್ಯುತ್ ಕಂಬಕ್ಕೆ ಡಿಕ್ಕಿ

Suddi Udaya

ಪುಂಜಾಲಕಟ್ಟೆ: ‘ಸ್ವಾಸ್ತ್ಯ ಸಂಕಲ್ಪ’ ಮಾದಕ ವಸ್ತು ಸೇವನೆಯ ದುಷ್ಪರಿಣಾಮದ ಬಗ್ಗೆ ಜಾಗೃತಿ ಕಾರ್ಯಕ್ರಮ

Suddi Udaya

ಗೇರುಕಟ್ಟೆ ಪತಂಜಲಿ ಯೋಗ ಶಾಖೆಯಲ್ಲಿ ರಕ್ಷಾಬಂಧನ ಆಚರಣೆ

Suddi Udaya

ಕಳಿಯ : ಕೊಜಪ್ಪಾಡಿ ಶ್ರೀ ನಾಗಬ್ರಹ್ಮ ಸ್ವಾಮಿ ಸನ್ನಿಧಿಯಲ್ಲಿ ಪ್ರತಿಷ್ಠಾ ವಾರ್ಷಿಕ ಉತ್ಸವ

Suddi Udaya
error: Content is protected !!