ಸುಲ್ಕೇರಿ ಮಹಮ್ಮಾಯಿ ದೇವಸ್ಥಾನದ 19 ವರ್ಷದ ಪ್ರತಿಷ್ಠಾ ವರ್ಧಂತಿ ಉತ್ಸವ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ನಾರಾವಿ ವಲಯದ ಸುಲ್ಕೇರಿ ಒಕ್ಕೂಟದ 42 ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭೆಯು ಪಾಶ್ವನಾರ್ಥ ಜೈನ್ ದೇವಸ್ಥಾನ ಅಧ್ಯಕ್ಷತೆಯಲ್ಲಿ ನಡೆಯಿತು.

ಮರೋಡಿ ಉಮಾಮಹೇಶ್ವರ ದೇವಸ್ಥಾನದ ಅಧ್ಯಕ್ಷ ದೇವೇಂದ್ರ ಹೆಗ್ಡೆ ಧಾರ್ಮಿಕ ಭಾಷಣ ಗೈದರು.
ಈ ಸಂದರ್ಭದಲ್ಲಿ ಕಬ್ಬಡಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಶಶಿಕಾಂತ್ ಸನ್ಮಾನ ನ ಮಾಡಲಾಯಿತು ಹಾಗೂ ಮಹಿಳಾ ದಿನಾಚರಣೆ ಅಂಗವಾಗಿ ಸಾಧನೆ ಮಾಡಿದ ಆಶಾಕಾರ್ಯಕರ್ತೆ ಹೇಮಲತಾ ಶೆಟ್ಟಿಯವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ವಲಯ ಜನ ಜಾಗೃತಿ ಅಧ್ಯಕ್ಷರು ನಿತ್ಯಾನಂದ ನಾವರ, ಲಯನ್ಸ ಸದಸ್ಯ ರವಿ ಶೆಟ್ಟಿ, ಪೂಜಾ ಸಮಿತಿ ಅಧ್ಯಕ್ಷ ದಯಾಕರ ರೈ, ಜನಜಾಗೃತಿ ಸದಸ್ಯ ಸದಾನಂದ ಗೌಡ, ಬೆಳ್ತಂಗಡಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಮ್ಯಾನೇಜರ್ ಸುಧೀರ್, ಮಹಮ್ಮಾಯಿ ಸ್ಫೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಸುನೀಲ್ ಪೂಜಾರಿ, ಒಕ್ಕೂಟದ ಅಧ್ಯಕ್ಷ ಯಶೋಧರ ಪೂಜಾರಿ ಉಪಸ್ಥಿತರಿದ್ದರು
ವಲಯದ ಮೇಲ್ವಿಚಾರಕರ ವಿಶಾಲ ಕೆ ನಿರೂಪಿಸಿ, ಪೂಜೆ ಸಮಿತಿ ಅಧ್ಯಕ್ಷರು ದಯಾಕರ ರೈ ಸ್ವಾಗತತಿಸಿ, ವಂದಿಸಿದರು













