28.1 C
ಪುತ್ತೂರು, ಬೆಳ್ತಂಗಡಿ
September 10, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಸಾಧಕರು

ಅಂಡಿಂಜೆ ಸಂಜೀವಿನಿ ಒಕ್ಕೂಟದ ಸದಸ್ಯೆ ಮಲ್ಲಿಕಾ ಎಸ್.ರಿಗೆ ಯಶಸ್ವಿ ಮಹಿಳಾ ಉದ್ಯಮಿ-2026ಪ್ರಶಸ್ತಿ

ಬೆಳ್ತಂಗಡಿ: ಅಂಡಿಂಜೆ ಸಂಜೀವಿನಿ ಒಕ್ಕೂಟದ ಸದಸ್ಯೆ ಮಲ್ಲಿಕಾ ಎಸ್.ರಿಗೆ ಯಶಸ್ವಿ ಮಹಿಳಾ ಉದ್ಯಮಿ-2026 ಪ್ರಶಸ್ತಿ ನಿಸರ್ಗ ಸಂಜೀವಿನಿ ಮಾದರಿ ಗ್ರಾ.ಪಂ. ಮಟ್ಟದ ಒಕ್ಕೂಟ ಇದರ ಪದಾಧಿಕಾರಿ ಮಲ್ಲಿಕಾ ಎಸ್ ಇವರು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಯಶಸ್ವಿ ಮಹಿಳಾ ಉದ್ಯಮಿ-2026 ಪ್ರಶಸ್ತಿಯನ್ನು ಪಡೆದಿರುತ್ತಾರೆ.

ಇವರು ಅಂಡಿಂಜೆ ಸಂಜೀವಿನಿ ಒಕ್ಕೂಟದ ಸದಸ್ಯೆ ಮಲ್ಲಿಕಾ ಎಸ್.ರಿಗೆ ಯಶಸ್ವಿ ಮಹಿಳಾ ಉದ್ಯಮಿ-೨೦೨೬ ಪ್ರಶಸ್ತಿ ಗ್ರಾಮದ ಅಂಬಲಪಲ್ಕೆ ನಿವಾಸಿ ಸುಂದರ ರವರ ಧರ್ಮಪತ್ನಿ. ಮಲ್ಲಿಕಾ ಎಸ್. ಇವರು ಮನೆಯಲ್ಲಿಯೇ ಸ್ವಂತ ಉದ್ದಿಮೆಯನ್ನು ಮಾಡಿ ಮಾದರಿ ಮಹಿಳೆ ಎನಿಸಿಕೊಂಡಿದ್ದಾರೆ. ಬಡತನದಲ್ಲಿ ಜೀವನ ನಡೆಸುತ್ತಿದ್ದ ಮಲ್ಲಿಕಾ ಎಸ್. ಸಂಜೀವಿನಿ ಒಕ್ಕೂಟದ ಸಹಕಾರದೊಂದಿಗೆ ದೀಪದ ಬತ್ತಿ ಉದ್ಯಮವನ್ನು ಪ್ರಾರಂಭಿಸಿ ತನ್ನೊಂದಿಗೆ ಗ್ರಾಮದ ಇತರ ಮಹಿಳೆಯರಿಗೂ ಉದ್ಯೋಗವನ್ನು ಕಲ್ಪಿಸಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣ ಯೋಜನೆ ಪಿಎಂಎಫ್‌ಎಂಇ ಯೋಜನೆಯೊಂದಿಗೆ ಬ್ಯಾಂಕಿನಿಂದ ಸಾಲವನ್ನು ಪಡೆದು ಅಕ್ಕಿರೊಟ್ಟಿ ಉದ್ಯಮವನ್ನು ಪ್ರಾರಂಭಿಸಿದರು. ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಮನೆಯ ಖರ್ಚನ್ನು ಸರಿದೂಗಿಸಿಕೊಂಡು ತನ್ನ ವ್ಯಾಪಾರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾ ಬಂದಿದ್ದಾರೆ ತನ್ನೊಂದಿಗೆ ಹಲವಾರು ಮಹಿಳೆಯರಿಗೆ ಕೆಲಸವನ್ನು ನೀಡಿ ಅವರನ್ನು ಸಬಲೇಯರನ್ನಾಗಿ ಮಾಡಿದ್ದಾರೆ.

ಸಿಂಧೂರ ಸಂಜೀವಿನಿ ಸಂಘದ ಸದಸ್ಯೆ, ಅಂಡಿಂಜೆ ಸಂಜೀವಿನಿ ಒಕ್ಕೂಟದ ಪದಾಧಿಕಾರಿಯಾಗಿರುವ ಇವರಿಗೆ ಕೃಷಿ ವಿಜ್ಞಾನ ಸಂಸ್ಥೆ ಬೆಂಗಳೂರು ಇವರು 2026 ಮಹಿಳಾ ಯಶಸ್ವಿ ಉದ್ಯಮಿ ಪ್ರಶಸ್ತಿ ನೀಡಿ ಗೌರವಿಸಿದೆ.

Related posts

ಚಾರ್ಮಾಡಿ: ಕೊಳವೆ ಬಾವಿ ತೆಗೆಯುವ ವೇಳೆ ಹೊಂಡಕ್ಕೆ ಜಾರಿದ ಲಾರಿ

Suddi Udaya

ಕೊಯ್ಯೂರು ಕಾಂತಜೆ ಸಮೀಪ ತಡೆ ಗೋಡೆಗೆ ಕೆ.ಎಸ್.ಆರ್.ಟಿ.ಸಿ.ಬಸ್ ಡಿಕ್ಕಿ, ತಪ್ಪಿದ ದೊಡ್ಡ ಅನಾಹುತ

Suddi Udaya

ಭಾರತ್ ಸ್ಕೌಟ್ ಗೈಡ್ ರಾಜ್ಯ ಸಂಸ್ಥೆಯಿಂದ ಸನ್ಮಾನಿತಗೊಂಡ ಬೆಳ್ತಂಗಡಿ ಶ್ರೀ ಧ.ಮಂ. ಆಂ.ಮಾ. ಶಾಲೆಯ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಕೊಕ್ಕಡ: ಗುಂಪಕಲ್ಲು ತೆಂಕುಬೈಲು, ಕೆಂಗಡೇಲು, ಮುಂಡೂರುಪಳಿಕ್ಕೆ ಪ್ರದೇಶದಲ್ಲಿ ಒಂಟಿಸಲಗ ದಾಳಿ: ಅಪಾರ ಕೃಷಿಗೆ ಹಾನಿ

Suddi Udaya

ಚಾರ್ಮಾಡಿ ಘಾಟಿಯಲ್ಲಿ ಪ್ರತ್ಯೇಕ ಎರಡು ಅಪಘಾತ: ಪ್ರಾಣಾಪಾಯದಿಂದ ಪಾರು

Suddi Udaya

ಜಮೀಯ್ಯತುಲ್ ಪಲಾಹ್ ಬೆಳ್ತಂಗಡಿ ವತಿಯಿಂದ ಪ್ರತಿಭಾ ಪುರಸ್ಕಾರ, ರೂ. 3 ಲಕ್ಷ‌ ವಿದ್ಯಾರ್ಥಿವೇತನ ವಿತರಣೆ

Suddi Udaya
error: Content is protected !!