ಬೆಳ್ತಂಗಡಿ: ಬೀಡಿ ಕಂಟ್ರಾಕ್ಟರ್, ಸರ್ವ ಧರ್ಮ ಪ್ರೇಮಿ, ಸರಳ ಸಜ್ಜನ , ಭಾವೈಕ್ಯತಾ ಆದರ್ಶವಾದಿ, ಸಮಾಜ ಸೇವಕ (ಮಮ್ಮದಕ್ಕ /ಮಹಮ್ಮದ್ ಕಾಕನೆಂದೇ ಹೆಸರುವಾಸಿಯಾಗಿದ್ದರು) ಮಹಮ್ಮದ್ ಶಿರ್ಲಾಲು (70ವ) ಹೃದಯಾಘಾತದಿಂದ ನಿಧನರಾದರು.
ಕಳೆದ 50 ವರ್ಷದಿಂದ ಬೀಡಿ ಕಂಟ್ರಾಕ್ಟರ್ ಆಗಿ ಪ್ರತಿಯೊಬ್ಬರಿಗೂ ಬೆನ್ನೆಲುಬಾಗಿದ್ದರು. ಕಳೆದ 12 ವರ್ಷದಿಂದ ಶಿರ್ಲಾಲು ಮಸೀದಿಯ ಗೌರವಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಮೃತರು ಮೂವರು ಪುತ್ರರು, ಐವರು ಪುತ್ರಿಯರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.
ನೂರಾರು ಕಾರ್ಮಿಕ ವರ್ಗ, ಅಧಿಕಾರಿ ವರ್ಗ, ಬಂಧುಮಿತ್ರರು,ಕುಟುಂಬಸ್ಥರು ಅಂತಿಮ ನಮನ ಸಲ್ಲಿಸಿದರು.













