
ಬೆಳ್ತಂಗಡಿ: ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೇ ರಾಂಕ್ ಪಡೆದಿರುವ ಚಿರಾಗ್ ನಾಯಕನನ್ನು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಶಶಿಧರ್ ಜಿ ಎಸ್ ಇವರು ಚಿರಾಗ್ ನಾಯಕ್ ಮನೆಗೆ ತೆರಳಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಶಾಂತ ಎಲ್, ಚಿರಾಗ್ ನಾಯಕ್ ತಂದೆ ಶಿಕ್ಷಕರಾದ ಯೋಗೀಶ್ ನಾಯಕ್, ತಾಯಿ ರಶ್ಮಿ ಪ್ರಭು, ಸೈಂಟ್ ಮೇರಿಸ್ ಶಾಲೆಯ ಶಿಕ್ಷಕಿ ವೀಣಾ, ಶಿಕ್ಷಕರ ಸಂಘದ ಶಿವಬಾಳು, ಪದ್ಮುಂಜಾ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಸುಮತಿ ಮುಂತಾದವರು ಹಾಜರಿದ್ದರು.







