ಬೆಳ್ತಂಗಡಿ: ಯೋಗ ಗುರು ಕುಶಾಲಪ್ಪ ಗೌಡ ಆವಿಷ್ಕಾರ ಯೋಗ ಹಾಗೂ ಶ್ರೀಮತಿ ಕಸ್ತೂರಿ ಇವರ ಉಪಸ್ಥಿತಿಯಲ್ಲಿ ಜಿಲ್ಲಾ ಕಾರಾಗೃಹ ಮಂಗಳೂರು ಇಲ್ಲಿನ ಕೈದಿಗಳಿಗೆ ಯೋಗಾ ತರಬೇತಿ ಹಾಗೂ ಬೋಧನೆಯನ್ನು ನೀಡಲಾಯಿತು.

ತರಬೇತಿಯ ಸಂದರ್ಭದಲ್ಲಿ ನಿತ್ಯ ಜೀವನಕ್ಕೆ ಪೂರಕವಾದ ಯೋಗ ಕ್ರಿಯೆ, ಆಸನ, ಸೂರ್ಯ ನಮಸ್ಕಾರ, ಪ್ರಾಣಾಯಾಮ ಹಾಗೂ ಧ್ಯಾನದ ತರಬೇತಿ ಒದಗಿಸಲಾಯಿತು.
ತರಬೇತಿ ಶಿಬಿರವನ್ನು ಏನೇಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ, ಎನೆಪೋಯ ಫಾರ್ಮಸಿ ಕಾಲೇಜು ಮತ್ತು ಸಂಶೋಧನೆ ಕೇಂದ್ರ, ಲಿಂಗ ಸಂವೇದನಾ ಕೋಶವಿಭಾಗದಿಂದ ಆಯೋಜಿಸಲಾಯಿತು. ಶಿಬಿರಕ್ಕೆ ಜೈಲಿನ ಅಧಿಕಾರಿಗಳು ಸಹಕರಿಸಿದರು.













