ಬೆಳ್ತಂಗಡಿ: ಬೆಳಂಗಡಿ ತಾಲೂಕು ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ ಸಂಪೂರ್ಣ ರಾಮಾಯಣ ಪ್ರವಚನ ಸಪ್ತಾಹ ಜೂ. 15ರಿಂದ ಜೂ.21 ರವರಗೆ ಪ್ರತಿದಿನ ಸಂಜೆ ಗಂಟೆ 6.೦೦ರಿಂದ 8.೦೦ ರವರೆಗೆ ಬೆಳ್ತಂಗಡಿ ಸಮಾಜ ಮಂದಿರದಲ್ಲಿ ನಡೆಯಲಿದೆ.
ಡಾ. ವೀಣಾ ಬನ್ನಂಜೆ ಅವರು ಕನ್ನಡದ ಪ್ರಸಿದ್ಧ ಲೇಖಕಿ, ಆಧ್ಯಾತ್ಮಿಕ ಚಿಂತಕಿ, ಮತ್ತು ಪ್ರಭಾವಿ ವಾಗ್ಮಿ, ಉಡುಪಿಯವರಾದ ಇವರು ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರ ಪುತ್ರಿ. ಸಾಹಿತ್ಯ ಮತ್ತು ತತ್ವಶಾಸ್ತçದಲ್ಲಿ ಅಪಾರ ಪಾಂಡಿತ್ಯ ಹೊಂದಿರುವ ಇವರು, ಧಾರ್ಮಿಕ ಉಪನ್ಯಾಸಗಳ ಮೂಲಕ ಜನಪ್ರಿಯರಾಗಿದ್ದು ಇವರಿಂದ ಪ್ರವಚನ ನಡೆಯಲಿದೆ.
ಪ್ರತಿ ವರ್ಷವೂ ಬೆಳ್ತಂಗಡಿಯ ಸಮಾಜ ಮಂದಿರದಲ್ಲಿ ಸಂಪೂರ್ಣ ರಾಮಾಯಣ ಪ್ರವಚನವನ್ನು ನಡೆಯುತ್ತಿದ್ದು ನೂರಾರು ಆಸಕ್ತರು ಭಾಗವಹಿಸುತ್ತಿದ್ದರು. ರಾಮಾಯಣ ಕಥಾ ಮಾಲಿಕೆಯನ್ನು ತಿಳಿಸುವ ಉದ್ದೇಶದಿಂದ ಸಂಘಟಕರು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬಹುದಾಗಿದೆ.













