ಕಡಿರುದ್ಯಾವರ : ಇಲ್ಲಿಯ ಸೋಮಂತಡ್ಕ-ದಿಡುಪೆ -ಸಂಸೆ ರಸ್ತೆಯ ಕುಕ್ಕಾವು ಕೊಲಂಬೆ ಎಂಬಲ್ಲಿ ಗುಡ್ಡದ ಮಳೆಯ ನೀರು ರಸ್ತೆಗೆ ಹರಿದು ಬಂದು ರಸ್ತೆಯು ಹಳ್ಳದಂತಾಗುತ್ತಿದೆ ಇದರಿಂದ ವಾಹನ ಸವಾರರು ಮತ್ತು ಶಾಲಾ ಮಕ್ಕಳಿಗೆ, ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ.
ಈ ಬಗ್ಗೆ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯವರು ಮುಂಜಾಗೃತಾ ಕ್ರಮವಾಗಿ ಸೋಮಂತಡ್ಕದಿಂದ ದಿಡುಪೆ ವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ಮಾಡಿ ನೀರನ್ನು ಚರಂಡಿಯಲ್ಲಿ ಸರಾಗವಾಗಿ ಹರಿದು ಹೋಗುವಂತೆ ಮಾಡುವುದು ಒಳಿತು ಎಂದು ಸ್ಥಳೀಯರು ತಿಳಿಸಿರುತ್ತಾರೆ.













