July 7, 2026
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿಶುಭಾರಂಭ

ಗುರುವಾಯನಕೆರೆಯಲ್ಲಿ ಕೃಷ್ಣ ವೆಜ್ ಫ್ಯಾಮಿಲಿ ರೆಸ್ಟೋರೆಂಟ್–ಸುಧಾಮ ಗಾರ್ಡನ್ ಶುಭಾರಂಭ: ಗಣ್ಯರ ಸಮ್ಮುಖದಲ್ಲಿ ಅದ್ದೂರಿ ಚಾಲನೆ

ಬೆಳ್ತಂಗಡಿ: ಗುರುವಾಯನಕೆರೆಯಲ್ಲಿ ನೂತನವಾಗಿ ಆರಂಭಗೊಂಡ ಕೃಷ್ಣ ವೆಜ್ ಫ್ಯಾಮಿಲಿ ರೆಸ್ಟೋರೆಂಟ್ ಹಾಗೂ ಸುಧಾಮ ಗಾರ್ಡನ್ ಉದ್ಘಾಟನಾ ಸಮಾರಂಭ ಜು.6ರಂದು ಸಂಜೆ ಅದ್ದೂರಿಯಾಗಿ ನಡೆಯಿತು.

ಶಾಸಕ ಹರೀಶ್ ಪೂಂಜ ರಿಬ್ಬನ್ ಕಟ್ ಮಾಡುವ ಮೂಲಕ ನೂತನ ಹೋಟೆಲ್ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂಸ್ಥೆ ಯಶಸ್ವಿಯಾಗಿ ಮುನ್ನಡೆದು ಜನರ ವಿಶ್ವಾಸ ಗಳಿಸಲಿ ಎಂದು ಆಶಿಸಿದರು.

ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ ದೀಪ ಪ್ರಜ್ವಲನೆಗೈದು ಶುಭ ಕೋರಿದರು.

ವೇದಿಕೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಪ್ರತಾಪಸಿಂಹ ನಾಯಕ್, ಅಳದಂಗಡಿ ಸತ್ಯದೇವತಾ ದೈವಸ್ಥಾನದ ಆಡಳಿತದಾರ ಶಿವಪ್ರಸಾದ್ ಅಜಿಲ, ಎಸ್.ಡಿ.ಎಂ ಐಟಿ ವಿಭಾಗದ ಸಿಇಒ ಪೂರನ್ ವರ್ಮ, ಎಕ್ಸೆಲ್ ಕಾಲೇಜಿನ‌ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಅರಮಲೆಬೆಟ್ಟ ಕ್ಷೇತ್ರದ ಆಡಳಿತ ಮೊಕ್ತೇಸರ ಸುಕೇಶ್ ಕುಮಾರ್ ಜೈನ್, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ, ಬೆಳ್ತಂಗಡಿ ಬಂಟರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ, ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಅಜಿತ್ ಕುಮಾರ್ ಶೆಟ್ಟಿ, ವಿದ್ವತ್ ಕಾಲೇಜಿನ ಚೆಯರ್ ಮ್ಯಾನ್ ಸುಭಾಶ್ಚಂದ್ರ ರೈ, ಉಜಿರೆ ರಬ್ಬರ್ ಸೊಸೈಟಿ ನಿವೃತ್ತ ಸಿಇಓ ರಾಜು ಶೆಟ್ಟಿ, ಉದ್ಯಮಿ ಪುಷ್ಪರಾಜ್ ಶೆಟ್ಟಿ ಬೆಳ್ತಂಗಡಿ, ಉದ್ಯಮಿ ಸೀತಾರಾಮ ಶೆಟ್ಟಿ ವೈಭವ್, ವೇಣೂರು ಪಿಎಸ್ಐ ಹಾಗೂ ಉಜಿರೆ ಗ್ರಾಮ ಪಂಚಾಯತ್ ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ,ಇಂದುಮತಿ ಬೆಳ್ತಂಗಡಿ, ಸರಿತಾ ದಿನೇಶ್, ಸಾನಿಯಾ ಶೆಟ್ಟಿ ಉಪಸ್ಥಿತರಿದ್ದು ನೂತನ ಸಂಸ್ಥೆಗೆ ಶುಭಾ ಹಾರೈಸಿದರು.

ಕಾರ್ಯಕ್ರಮದಲ್ಲಿ ಉಜಿರೆ ಎಸ್.ಡಿ.ಎಂ ಪ್ರಾಂಶುಪಾಲರಾದ ವಿಶ್ವನಾಥ, ಉದ್ಯಮಿ ವಸಂತ ಶೆಟ್ಟಿ ಶ್ರದ್ಧಾ ಬೆಳ್ತಂಗಡಿ, ಶಶಿರಾಜ್ ಶೆಟ್ಟಿ ಜಿ.ಕೆರೆ, ಉಮೇಶ್ ಶೆಟ್ಟಿ ದುರ್ಗಾ ಉಜಿರೆ, ಪ್ರಕಾಶ್ ಜೈನ್ ಡೇವುಣಿ, ಮಂಜುನಾಥ ರೈ, ರವೀಂದ್ರ ಶೆಟ್ಟಿ ಬಳಂಜ, ನಿರಂಜನ್ ಶೆಟ್ಟಿ ಉಜಿರೆ, ರಘುರಾಮ್ ಶೆಟ್ಟಿ ಸಾಧಾನ, ಪ್ರಜ್ವಲ್ ರೈ ವಿದ್ವತ್, ಎಂ. ಮಮತಾ ಶೆಟ್ಟಿ ಗುರುವಾಯನಕೆರೆ, ಕಾಶಿನಾಥ್, ನವೀನ್ ಕೋಟ್ಯಾನ್ ನಿಸರ್ಗ, ಪ್ರಕಾಶ್ ಕಾಮತ್ ಜಿ.ಕೆರೆ, ಸುನೀಶ್ ಕುಮಾರ್ ಕಡಂಬು, ಜಯರಾಮ್ ಶೆಟ್ಟಿ ಧರ್ಮಸ್ಥಳ, ಚಿದಾನಂದ ಇಡ್ಯ, ಸುಧೀರ್ ಶೆಟ್ಟಿ, ಶೈಲೇಶ್ ಶೆಟ್ಟಿ, ಬಿ.ಎಸ್. ಕುಲಾಲ್, ಸಂತೋಷ್ ಪಿ. ಕೋಟ್ಯಾನ್ ಬಳಂಜ, ಪ್ರಸಾದ್ ಶೆಟ್ಟಿ ಏಣಿಂಜೆ, ವಿಜಯ್ ಜೈನ್ ನಾವರ ಸೇರಿದಂತೆ ಹಲವರು ಭಾಗವಹಿಸಿ ಶುಭ ಹಾರೈಸಿದರು.

ಶ್ರೇಯಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕೃಷ್ಣ ವೆಜ್ ಫ್ಯಾಮಿಲಿ ರೆಸ್ಟೋರೆಂಟ್‌ನ ಪಾಲುದಾರರಾದ ದಿನೇಶ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಯೋಗೀಶ್ ಪೈ, ಲಕ್ಷ್ಮೀಶ್ ಶೆಟ್ಟಿ ಹಾಗೂ ರಘು ಶೆಟ್ಟಿ ಕಜೆ ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದರು. ಬಳಿಕ ಸಂಗೀತ ರಸಮಂಜರಿ ನಡೆಯಿತು. ಆಗಮಿಸಿದ ಎಲ್ಲರಿಗೂ ಶುಚಿ ಹಾಗೂ ರುಚಿಕರ ಉಪಹಾರ ಮತ್ತು ಊಟದ ವ್ಯವಸ್ಥೆ ಮಾಡಲಾಗಿತ್ತು.

Related posts

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ಶಶಿಧರ್ ಶೆಟ್ಟಿ ನವಶಕ್ತಿ ಆಯ್ಕೆ

Suddi Udaya

ಪ್ರಧಾನಿ ಭಾಷಣ ಕನ್ನಡಕ್ಕೆ ಭಾಷಾಂತರ : ಎಂ.ಎಲ್.ಸಿ ಪ್ರತಾಪಸಿಂಹ ನಾಯಕ್ ರಿಗೆ ರಾಷ್ಟ್ರ ನಾಯಕರ ಮೆಚ್ಚುಗೆ

Suddi Udaya

ನಾರಾವಿ ಸಂತ ಅಂತೋನಿ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

Suddi Udaya

ಹದಗೆಟ್ಟಿರುವ ಸುಲ್ಕೇರಿಯ ದೇರಂಡೋಡಿ ಮತ್ತು ದೇವರಗುಡ್ಡೆ ರಸ್ತೆ: ದುರಸ್ತಿಗೊಳಿಸುವಂತೆ ಸ್ಥಳೀಯರ ಒತ್ತಾಯ

Suddi Udaya

ಮಚ್ಚಿನ ಸರಕಾರಿ ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

Suddi Udaya

ಕನ್ಯಾಡಿ : ಶ್ರೀ ರಾಮ ಕ್ಷೇತ್ರದ ಗುರುದೇವ ಮಠದಲ್ಲಿ ಆಯುಧ ಪೂಜೆ

Suddi Udaya
error: Content is protected !!