
ಬೆಳ್ತಂಗಡಿ: ಹತ್ಯಡ್ಕ ಗ್ರಾಮದ ಅರಸಿನಮಕ್ಕಿ ಉಪ್ಪರಡ್ಕ ನಿವಾಸಿ ಬಾಲಕೃಷ್ಣ ಆಚಾರ್ಯ (69ವ ) ಎಂಬವರ ಮೃತದೇಹ ಜು.೬ರಂದು ಬೆಳ್ತಂಗಡಿ ಬಸ್ ನಿಲ್ದಾಣ ಬಳಿ ಪತ್ತೆಯಾಗಿದೆ.
ಬೆಳ್ತಂಗಡಿ ಬಸ್ನಿಲ್ದಾಣದ ವೈನ್ ಶಾಪ್ ಬಳಿ ಇಂದು ಸಂಜೆ ಪತ್ತೆಯಾಗಿದ್ದು, ಮೃತರ ಶರ್ಟ್ನಲ್ಲಿ ಕಿಸೆಯಲ್ಲಿ ಕಂಡು ಬಂದ ಆಧಾರ ಕಾರ್ಡ್ನಲ್ಲಿ ಮೃತರ ಗುರುತು ಪತ್ತೆಯಾಗಿದ್ದು, ಮೃತರು ಅರಸಿನಮಕ್ಕಿ ಉಪ್ಪರಡ್ಕ ನಿವಾಸಿ ಎಂದು ತಿಳಿದು ಬಂದಿದೆ. ಮೃತದೇಹವನ್ನು ಖುಷಿ ಆಂಬುಲೆನ್ಸ್ನ ಅಭಿಲಾಷ್ ಅವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು.














