July 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಬೆಳ್ತಂಗಡಿ

ಉಜಿರೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂಸೇವಕ ಭಾಸ್ಕರ ಆಚಾರ್ಯ ವಿಧಿವಶ

ಉಜಿರೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂಸೇವಕ ಭಾಸ್ಕರ ಆಚಾರ್ಯ( 80ವರ್ಷ) ಉಜಿರೆ ಅವರು ಅಲ್ಪಕಾಲದ ಅಸೌಖ್ಯದಿಂದ ಜು.6 ರಂದು ಬೆಳಿಗ್ಗೆ ನಿಧನರಾದರು.

ವೃತ್ತಿಯಲ್ಲಿ ವಾಹನ ಮತ್ತು ಪಂಪ್ ಸೆಟ್ ಮೆಕ್ಯಾನಿಕ್ ಆಗಿ ಸ್ಥಳೀಯವಾಗಿ ಹೆಸರುವಾಸಿಯಾಗಿದ್ದ ಇವರು ಅಯೋಧ್ಯಾ ಶ್ರೀ ರಾಮ ಮಂದಿರ ಹೋರಾಟದ ಸಂದರ್ಭದಲ್ಲಿ ಕರ್ನಾಟಕದಿಂದ ಹೋದ ರಾಮಶಿಲಾಪೂಜನ ರಥದೊಂದಿಗೆ ಅಯೋಧ್ಯೆ ತಲುಪಿದ್ದ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂಸೇವಕರಾಗಿದ್ದರು. ಸಂಘದ ಶಾಖೆಯಲ್ಲಿ ಸುಶ್ರಾವ್ಯವಾಗಿ ಹಾಡು ಹೇಳಿ ಕೊಡುತ್ತಿದ್ದ, ಪಥ ಸಂಚಲನದಲ್ಲಿ ಶಂಖವಾದಕರಾಗಿ ಭಾಗವಹಿಸುತ್ತಿದ್ದ, ರಾಷ್ಟ್ರವಾದಿಯಾಗಿ, ತನ್ನ ಜೀವಿತಾವಧಿ ಪೂರ್ತಿ ಸಕ್ರಿಯವಾಗಿ ಸಮಾಜ ಸೇವೆಯಲ್ಲಿ ಪಾಲ್ಗೊಂಡಿದ್ದರು.

ಮೃತರು ಪತ್ನಿ ಶಾರದಾ, ಓರ್ವೆ ಪುತ್ರಿ, ಈರ್ವರೂ ಪುತ್ರರಾದ ಲವ ಕುಮಾರ್ ಮತ್ತು ಕುಶ ಕುಮಾರ್ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

Related posts

ಮಡಂತ್ಯಾರು: ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಜೇನು ಕೃಷಿ ತರಬೇತಿ ಹಾಗೂ ಭತ್ತದ ಕೃಷಿ ಉತ್ಪಾದನೆ ಬಗ್ಗೆ ಮಾಹಿತಿ

Suddi Udaya

ಭವಿಷ್ಯದ ಮಾರ್ಗಸೂಚಿ ರೂಪಿಸಲು ಬೆಳ್ತಂಗಡಿ ಧರ್ಮಪ್ರಾಂತ್ಯದಲ್ಲಿ ಪಾಲನಾ ಸಮಿತಿ ಹಾಗೂ ಧರ್ಮಗುರುಗಳ ಸಮ್ಮೇಳನ

Suddi Udaya

ನಡ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ

Suddi Udaya

ಕಲ್ಲೇರಿ: ಅಡಿಕೆ ಬೆಳೆ ಮತ್ತು ಕಾಳುಮೆಣಸು ಬೆಳೆಗಳ ಆಧುನಿಕ ಬೇಸಾಯ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮ

Suddi Udaya

ಮೇಲಂತಬೆಟ್ಟು ಭಗವತಿ ದೇವಸ್ಥಾನ ಬ್ರಹ್ಮಕಲಶೋತ್ಸವ ಸಂಪನ್ನ: ಅಗ್ನಿಗುಳಿಗನ ಗಗ್ಗರ ಸೇವೆ

Suddi Udaya

ನಾವೂರು ಗ್ರಾಮ ಪಂಚಾಯತ್ ಗ್ರಾಮಸಭೆ

Suddi Udaya
error: Content is protected !!