ಉಜಿರೆ: ಮಿತ್ರ ಮಹಿಳಾ ಮಂಡಳಿ ಅರಳಿ ಮತ್ತು ಮಿತ್ರ ಯುವಕ ಮಂಡಲ ಅರಳಿ ಇವರ ಜಂಟಿ ಆಶ್ರಯದಲ್ಲಿ ಕೇಸರ್ ದ ಗೊಬ್ಬು ಕಾರ್ಯಕ್ರಮ ಸುಂದರ ಬಂಗೇರ ಅಲ್ಯೊಟ್ಟು ಇವರ ಗದ್ದೆಯಲ್ಲಿ ನಡೆಯಿತು.
ಅನಂತ ಕೃಷ್ಣ ಪಡುವೆಟ್ನಾಯ ಇವರು ದೀಪ ಬೆಳಗಿಸಿ ಶುಭ ಹಾರೈಸುವುದರೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆದವು. ಕಾರ್ಯಕ್ರಮಕ್ಕೆ ಧಾರ್ಮಿಕ ಮುಖಂಡರವಾದ ಕಿರಣ್ ಚಂದ್ರ ಪುಷ್ಪಗಿರಿ ಇವರು ಆಗಮಿಸಿ ಶುಭಹಾರೈಸಿದರು. ಎರಡು ಸಂಘಟನೆಯ ಅಧ್ಯಕ್ಷರು, ಪದಾಧಿಕಾರಿಗಳು, ಊರಿನ ಗಣ್ಯರು ಎಲ್ಲರ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
















