ಅಳದಂಗಡಿ:ಅಳದಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಗಕಾರಂದೂರು ಗ್ರಾಮದ ಕೆದ್ದು ನರ್ಸರಿ ರಸ್ತೆಯನ್ನು ಗ್ರಾಮಸ್ಥರು ಸ್ವಯಂಪ್ರೇರಿತವಾಗಿ ಜು 26ರಂದು ಶ್ರಮದಾನದ ಮೂಲಕ ಅಭಿವೃದ್ಧಿಪಡಿಸಿ ಮಾದರಿಯಾಗಿದ್ದಾರೆ.
ಸಾರ್ವಜನಿಕರಿಗೆ ಸುಗಮ ಸಂಚಾರ ಕಲ್ಪಿಸುವ ಉದ್ದೇಶದಿಂದ ಗ್ರಾಮಸ್ಥರು ಒಗ್ಗಟ್ಟಿನಿಂದ ರಸ್ತೆ ಕಾಮಗಾರಿಯನ್ನು ಕೈಗೊಂಡಿದ್ದು, ಸ್ಥಳೀಯರ ಶ್ರಮ ಮತ್ತು ಸಹಕಾರದಿಂದ ರಸ್ತೆ ಬದಿಯಯಲ್ಲಿದ ಕಳೆಗಿಡಗಂಟಿಗಳನ್ನು ತೆಗೆದು ಸರಿಪಡಿಸಲಾಗಿದೆ. ಜೆಸಿಬಿ ಮೂಲಕ ರಸ್ತೆಯನ್ನು ದುರುಸ್ತಿಗೊಳಿಸಲಾಗುತ್ತಿದೆ.
ಗ್ರಾಮಸ್ಥರ ಈ ಸಾಮಾಜಿಕ ಕಳಕಳಿ ಹಾಗೂ ಸೇವಾ ಮನೋಭಾವಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಶ್ರಮದಾನದಲ್ಲಿ ಸಂಜೀವ ಪೂಜಾರಿ ಗುರುದೇವ ಕೊಡಂಗೆ, ಪ್ರಶಾಂತ ಕೊಡಂಗೆ, ಹರೀಶ್ ಕುಲಾಲ್, ಗಣೇಶ್, ಸುನಿಲ್, ರಮೇಶ್ ಆಚಾರಿಬೆಟ್ಟು, ಪ್ರಭಾಕರ, ಪ್ರವೀಣ್, ಅರವಿಂದ, ಸುಧಾಕರ್, ಪೀಟರ್, ಶಕೀಬ್, ರಾಜೇಶ್, ನವೀನ್, ಸತೀಶ್, ಪ್ರಜ್ವಲ್, ಯಶೋಧರ, ರಮೇಶ್, ರಂಜಿತ್, ಭಾಸ್ಕರ, ರಮಾನಂದ ಸೇರಿದಂತೆ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
















