ಬಳಂಜ: ತಾಲೂಕಿನ ನಾಲ್ಕೂರು ಗ್ರಾಮದ ಪುಣ್ಕೆದೊಟ್ಟು ನಾಗಬನದಲ್ಲಿ ನಾಗರ ಪಂಚಮಿ ಹಬ್ಬವನ್ನು ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

ನಾಗಬನದಲ್ಲಿ ನಾಗದೇವರಿಗೆ ತನು ತಂಬಿಲ ಅರ್ಪಿಸಿ, ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಯಿತು. ನಾಗಬನಕ್ಕೆ ಸಂಬಂಧಿಸಿದ ಕುಟುಂಬಸ್ಥರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಾಗದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಪುಣ್ಕೆದೊಟ್ಟು ಶ್ರೀಧರ ಪೂಜಾರಿ, ಸುಶೀಲ, ರಾಜೀವ ಸಾಲಿಯಾನ್ ಮುಂಡೂರು, ಸದಾನಂದ ಸಾಲಿಯಾನ್ ಬಳಂಜ, ನಾರಾಯಣ ಸಾಲಿಯಾನ್ ವೇಣೂರು,ಲಕ್ಷ್ಮಣ ಪೂಜಾರಿ ವೇಣೂರು, ಸಂತೋಷ್ ಪಿ. ಕೋಟ್ಯಾನ್ ಬಳಂಜ ಸೇರಿದಂತೆ ಮಹಿಳೆಯರು,ಮಕ್ಕಳು,ಯುವಕರು, ಕುಟುಂಬಸ್ಥರು ಹಾಗೂ ಭಕ್ತರು ಉಪಸ್ಥಿತರಿದ್ದರು.












