September 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ವೇಣೂರು: ಶಿವಪ್ರಸಾದ ವೆಲ್ಡಿಂಗ್ ವರ್ಕ್ಸ್ ಮಾಲಕ ಸೀತಾರಾಮ ಕುಲಾಲ್ ನಿಧನ

ವೇಣೂರು ಮಹಾವೀರ ನಗರದ ಶಿವಪ್ರಸಾದ ವೆಲ್ಡಿಂಗ್ ವರ್ಕ್ಸ್ ಇದರ ಮಾಲಕ ಸೀತಾರಾಮ ಕುಲಾಲ್ (44 ವ) ರವರು ಸೆ.6 ರಂದು ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಇವರು ಯುವಕ ಮಂಡಲ ವೇಣೂರು, ಯುವಸೇವಾ ಸಂಗಮ ವೇಣೂರು, ಭಾ.ಜ.ಪ. ಹಾಗೂ ಕುಲಾಲ ಸಂಘದಲ್ಲಿ ಸಕ್ರೀಯ ಸದಸ್ಯರಾಗಿ ಸೇವಾ ಚಟುವಟಿಕೆಗಳಲ್ಲಿ ಹಾಗೂ ವೇಣೂರಿನ ಶ್ರೀ ಗಣೇಶೋತ್ಸವಕ್ಕೆ ಹೊಸ ರೂಪದ ಹೊಸ ಟ್ಯಾಬ್ಲೋಗಳನ್ನು ಮಾಡಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ. ಅಲ್ಲದೆ ಇವರ ವೆಲ್ಡಿಂಗ್ ವೃತ್ತಿಯಲ್ಲಿ ಹಲವಾರು ಮಂದಿ ತರಬೇತಿಯನ್ನು ಪಡೆದು ಈಗ ಸ್ವಾವಲಂಭಿಯಾಗಿ ಹೊಸ ವೆಲ್ಡಿಂಗ್ ಶಾಪ್ ತೆರೆದು, ಇವರು ಶಿಷ್ಯರಿಗೆ ಬೆಳಕಾಗಿದ್ದಾರೆ.


ಮೃತರು ಪತ್ನಿ ಸಮಿತಾ, ಮಕ್ಕಳಾದ ಕು| ತಸ್ವಿ, ಪುತ್ರ ತುಷಾರ್ ಹಾಗೂ ಸಹೋದರರು, ಸಹೋದರಿಯರು ಹಾಗೂ ಬಂಧುಗಳನ್ನು ಅಗಲಿದ್ದಾರೆ.

Related posts

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ : ರಾಷ್ಟ್ರಮಟ್ಟದ ವಿಚಾರ ಸಂಕಿರಣಕ್ಕೆ ಚಾಲನೆ

Suddi Udaya

ಬೆಳ್ತಂಗಡಿ ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರ್ಕಾರಿ ವಕೀಲರಾಗಿರುವ ಮನೋಹರ ಕುಮಾರ್ ರಿಗೆ ಹೆಚ್ಚುವರಿ ಹೊಣೆ ಹೊರಿಸಿ ಸರಕಾರ ಆದೇಶ

Suddi Udaya

ಧರ್ಮಸ್ಥಳ: ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಗೆ ಅಯೋಧ್ಯೆ ಶ್ರೀ ರಾಮ ಮಂತ್ರಾಕ್ಷತೆ ವಿತರಣೆ

Suddi Udaya

ಬೆಳಾಲು: ಮೈತ್ರಿ ಯುವಕ ಮಂಡಲ ವಾರ್ಷಿಕ ಮಹಾಸಭೆ ಮತ್ತು ಲೆಕ್ಕ ಪತ್ರ ಮಂಡನೆ

Suddi Udaya

ಲೋಕಸಭಾ ಚುನಾವಣಾ ನೀತಿ ಸಂಹಿತೆ: ಗ್ರಾ.ಪಂ. ನೌಕರರ ಶಾಂತಿಯುತ ಪ್ರತಿಭಟನೆ ಮುಕ್ತಾಯ: ಆ.20 ರಿಂದ ಬೆಂಗಳೂರು ವಿಧಾನಸೌಧ ಮುಂಭಾಗ ಬೃಹತ್ ಪ್ರತಿಭಟನೆ

Suddi Udaya

ಕಾಪಿನಡ್ಕ ಆಟೋ ಚಾಲಕ- ಮಾಲಕ ಸಂಘದ ಮಾಜಿ ಅಧ್ಯಕ್ಷ ಸುಂದರ ದಾಸ್ ನಿಧನ

Suddi Udaya
error: Content is protected !!