22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿ

ಓಡಿಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ

ಮದ್ದಡ್ಕ:ಶಿವನನ್ನು ಶಿವಯಾದ ಆರಾಧನೆ ಮಾಡುವುದು ನಮ್ಮ ಹಿಂದೂ ಧರ್ಮ ದೇವರಲ್ಲಿ ಮತ್ತು ಭಕ್ತರಲ್ಲಿ ಇರುವ ಶಾಸಾತ್ಕಾರ ನೋಡುವ ಭಾವನೆಯೆ ನಮ್ಮ ಬದುಕು ಎಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ ಅಲ್ಲಿ ಮಂಗಳ ಕಾರ್ಯ ನಡೆಯಬೇಕು ಎಂದು ಹೈ ಕೋರ್ಟ್ ವಕೀಲರಾದ ಪ್ರಜ್ವಲ್ ಬಂಗೇರ ನುಡಿದರು ಅವರು ಫೆ 2ರಿಂದ ಫೆ 4ರವರೆಗೆ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿದ ಜಾತ್ರಾಮಹೋತ್ಸವದ ಫೆ 2ರಂದು ಧಾರ್ಮಿಕ ಸಭಾಕಾರ್ಯಕ್ರಮ ಜರಗಿತು

ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ ವಹಿಸಿದ್ದರು ವೇದಿಕೆಯಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮು ಬಸ್ತಿ ಪಲ್ಕೆ ಪಡಂಗಡಿ. ಶಾಂತಾ ಜೆ ಬಂಗೇರ ಕುವೆಟ್ಟು. ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಿದಾನಂದ ಇಡ್ಯ.ಯವ ಸಮಿತಿ ಅಧ್ಯಕ್ಷ ಅಶ್ವಿತ್ ಓಡೀಲು. ಮಾತ್ರ ಮಂಡಳಿ ಅಧ್ಯಕ್ಷೆ ಧನಲಕ್ಷ್ಮಿ ಚಂದ್ರಶೇಖರ್.ಭಜನಾ ಸಮಿತಿ ಅಧ್ಯಕ್ಷ ಸಂದೇಶ್ ಅನಿಲ. ಉಪಸ್ಥಿತರಿದ್ದರು ಚಿದಾನಂದ ಇಡ್ಯ ಸ್ವಾಗತಿಸಿ ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು ಸಂದೇಶ್ ಅನಿಲ ಧನ್ಯವಾದ ವಿತ್ತರು ತಂತ್ರಿಗಳಾದ ವೇದಮೂರ್ತಿ ಉದಯಪಾಂಗಣ್ಣಾಯ ನೇತೃತ್ವದಲ್ಲಿ ಪ್ರಧಾನ ಅರ್ಚಕರಾದ ರಘರಾಮ್ ಭಟ್ ಫೆ 2ರಂದು ಶತರುದ್ರಾಭಿಷೇಕ ಇನ್ನಿತರ ಧಾರ್ಮಿಕ ವಿಧಿ ವಿಧಾನಗಳು ಜರಗಿತು ಸಾಯಂಕಾಲ ಪಡಂಗಡಿ. ಕುವೆಟ್ಟು. ಸೊಣಂದೂರು. ಓಡಿಲ್ನಾಳ ಗ್ರಾಮದ ಭಕ್ತಾದಿಗಳ ಹಸಿರು ಹೊರೆಕಾಣಿಕೆ ವಿವಿಧ ಭಜನಾ ತಂಡದ ನ್ರತ್ಯ ಭಜನೆಯೊಂದಿಗೆ ಮೆರವಣಿಗೆಯಲ್ಲಿ ತರಲಾಯಿತು ಫೆ 3ರಂದು ಕಲಶಾಧಿವಾಸ. ಗಣಹೋಮ. ಪ್ರಧಾನ ಹೋಮ ಮಧ್ಯಾಹ್ನ ಮಹಾಪೂಜೆ ದ್ವಜರೋಹಣ ದೇವರ ಬಲಿ ಉತ್ಸವ ಸಾರ್ವಜನಿಕ ಅನ್ನಸಂತರ್ಪಣೆ ಸಾಯಂಕಾಲ ದೇವರ ದರ್ಶನ ಬಲಿ ಉತ್ಸವ ಜರಗಿತು ಸಾಂಸ್ಕೃತಿಕ ಕಾರ್ಯಕ್ರಮ ಪುತ್ತೂರು ಜಗದೀಶ್ ಆಚಾರ್ಯ ಇವರಿಂದ ಸಂಗೀತ ಗಾನ ಸಂಭ್ರಮ ಹಾಗೂ ವೀರಭದ್ರ ಸ್ವಾಮಿ ದಶಾವತಾರ ಯಕ್ಷಗಾನ ಮಂಡಳಿ ಹಿರಿಯಡ್ಕ ಇವರಿಂದ ಮಾಯೊದ ಅಜ್ಜೆ ಯಕ್ಷಗಾನ ಬಯಲಾಟ ಜರಗಿತು ಜಾತ್ರಾಮಹೋತ್ಸವ ಯಶಶ್ವಿಗೆ ವ್ಯವಸ್ಥಾಪನಾ ಸಮಿತಿ ಸದಸ್ಯರು ವಿಜಯ ಸಾಲಿಯನ್ ಪಣಕಜೆ. ಎಸ್ ಗಂಗಾಧರ ರಾವ್ ಕೆವುಡೇಲು.ರಾಜ್ ಪ್ರಕಾಶ್ ಪಡ್ಡೈಲು. ನೇಹಾ (ಅಶ್ವಿನಿ)ನಾಯಕ್ ಪಣಕಜೆ. ಭಜನಾ ಸಮಿತಿ ಕಾರ್ಯದರ್ಶಿ ಕುಶಾಲಪ್ಪ ಕಿನ್ನಿಗೋಳಿ. ಯುವ ಸಮಿತಿ ಕಾರ್ಯದರ್ಶಿ ಹರೀಶ್ ಕೋಟ್ಯಾನ್ ಮದ್ದಡ್ಕ. ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಪುರಿಪಟ್ಟ ಕೋಶಾಧಿಕಾರಿ. ವಸಂತ ಗೌಡ ವರಕಬೆ ಮಾತ್ರ ಮಂಡಳಿ ಕಾರ್ಯದರ್ಶಿ ದೀಕ್ಷಾ ಸದಾನಂದ. ದೇವಸ್ಥಾನದ ಕಾರ್ಯನಿರ್ವಾಕ ವಿಕಾಸ್ ಶೆಟ್ಟಿ ಎಲ್ಲಾ ಸಮಿತಿಗಳ ಸದಸ್ಯರು ಭಕ್ತಾಭಿಮಾನಿಗಳು ಸಹಕರಿಸಿದರು ಫೆ 4ರಂದು ಬೆಳಿಗ್ಗೆ ಸಂಪ್ರೋಕ್ಷಣಾ ವಿಧಿ ಮಹಾಪೂಜೆ ವೈದಿಕ ಮಂತ್ರಾಕ್ಷತೆ ಜರಗಿತು

Related posts

ದಿಡುಪೆ: ಮನೆಯ ಹೊರ ಛಾವಣಿಯಿಂದ ಸಾಕು ನಾಯಿಯನ್ನು ಹೊತ್ತೊಯ್ದ ಚಿರತೆ

Suddi Udaya

ಉಜಿರೆ : ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಸಂಭ್ರಮಾಚರಣೆ ಪ್ರಯುಕ್ತ ವಿದ್ಯಾರ್ಥಿ ವೇತನ ವಿತರಣೆ

Suddi Udaya

ಚಿರನಿದ್ರೆಗೆ ಜಾರಿದ ಮಾಜಿ ಶಾಸಕ ಕೆ. ವಸಂತ ಬಂಗೇರ ಮೇ9 ರಂದು (ನಾಳೆ) ಬೆಳಿಗ್ಗೆ ಹಳೆಕೋಟೆ ನಿವಾಸದಲ್ಲಿ ಸಾರ್ವಜನಿಕ ಅಂತಿಮ ದರ್ಶನ

Suddi Udaya

ಸಾಮೂಹಿಕ ವರ ಮಹಾಲಕ್ಷ್ಮೀ ಪೂಜೆ: ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ-ತಾರಾ ದಂಪತಿ ಯವರಿಂದ 1,300 ಮಂದಿಗೆ ಸೀರೆ ವಿತರಣೆ

Suddi Udaya

ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್ ನಿಂದ ಕನ್ಯಾನ ಸದಾಶಿವ ಶೆಟ್ಟಿ ರವರಿಗೆ ಸನ್ಮಾನ

Suddi Udaya

ವಾಲಿಬಾಲ್ ಪಂದ್ಯಾಟ: ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳು ಹಾಗೂ ಪದ್ಮುಂಜ ಪ್ರೌಢಶಾಲಾ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ಎರಡು ತಂಡಗಳು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!