September 6, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿ

ಓಡಿಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ

ಮದ್ದಡ್ಕ:ಶಿವನನ್ನು ಶಿವಯಾದ ಆರಾಧನೆ ಮಾಡುವುದು ನಮ್ಮ ಹಿಂದೂ ಧರ್ಮ ದೇವರಲ್ಲಿ ಮತ್ತು ಭಕ್ತರಲ್ಲಿ ಇರುವ ಶಾಸಾತ್ಕಾರ ನೋಡುವ ಭಾವನೆಯೆ ನಮ್ಮ ಬದುಕು ಎಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ ಅಲ್ಲಿ ಮಂಗಳ ಕಾರ್ಯ ನಡೆಯಬೇಕು ಎಂದು ಹೈ ಕೋರ್ಟ್ ವಕೀಲರಾದ ಪ್ರಜ್ವಲ್ ಬಂಗೇರ ನುಡಿದರು ಅವರು ಫೆ 2ರಿಂದ ಫೆ 4ರವರೆಗೆ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿದ ಜಾತ್ರಾಮಹೋತ್ಸವದ ಫೆ 2ರಂದು ಧಾರ್ಮಿಕ ಸಭಾಕಾರ್ಯಕ್ರಮ ಜರಗಿತು

ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ ವಹಿಸಿದ್ದರು ವೇದಿಕೆಯಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮು ಬಸ್ತಿ ಪಲ್ಕೆ ಪಡಂಗಡಿ. ಶಾಂತಾ ಜೆ ಬಂಗೇರ ಕುವೆಟ್ಟು. ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚಿದಾನಂದ ಇಡ್ಯ.ಯವ ಸಮಿತಿ ಅಧ್ಯಕ್ಷ ಅಶ್ವಿತ್ ಓಡೀಲು. ಮಾತ್ರ ಮಂಡಳಿ ಅಧ್ಯಕ್ಷೆ ಧನಲಕ್ಷ್ಮಿ ಚಂದ್ರಶೇಖರ್.ಭಜನಾ ಸಮಿತಿ ಅಧ್ಯಕ್ಷ ಸಂದೇಶ್ ಅನಿಲ. ಉಪಸ್ಥಿತರಿದ್ದರು ಚಿದಾನಂದ ಇಡ್ಯ ಸ್ವಾಗತಿಸಿ ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು ಸಂದೇಶ್ ಅನಿಲ ಧನ್ಯವಾದ ವಿತ್ತರು ತಂತ್ರಿಗಳಾದ ವೇದಮೂರ್ತಿ ಉದಯಪಾಂಗಣ್ಣಾಯ ನೇತೃತ್ವದಲ್ಲಿ ಪ್ರಧಾನ ಅರ್ಚಕರಾದ ರಘರಾಮ್ ಭಟ್ ಫೆ 2ರಂದು ಶತರುದ್ರಾಭಿಷೇಕ ಇನ್ನಿತರ ಧಾರ್ಮಿಕ ವಿಧಿ ವಿಧಾನಗಳು ಜರಗಿತು ಸಾಯಂಕಾಲ ಪಡಂಗಡಿ. ಕುವೆಟ್ಟು. ಸೊಣಂದೂರು. ಓಡಿಲ್ನಾಳ ಗ್ರಾಮದ ಭಕ್ತಾದಿಗಳ ಹಸಿರು ಹೊರೆಕಾಣಿಕೆ ವಿವಿಧ ಭಜನಾ ತಂಡದ ನ್ರತ್ಯ ಭಜನೆಯೊಂದಿಗೆ ಮೆರವಣಿಗೆಯಲ್ಲಿ ತರಲಾಯಿತು ಫೆ 3ರಂದು ಕಲಶಾಧಿವಾಸ. ಗಣಹೋಮ. ಪ್ರಧಾನ ಹೋಮ ಮಧ್ಯಾಹ್ನ ಮಹಾಪೂಜೆ ದ್ವಜರೋಹಣ ದೇವರ ಬಲಿ ಉತ್ಸವ ಸಾರ್ವಜನಿಕ ಅನ್ನಸಂತರ್ಪಣೆ ಸಾಯಂಕಾಲ ದೇವರ ದರ್ಶನ ಬಲಿ ಉತ್ಸವ ಜರಗಿತು ಸಾಂಸ್ಕೃತಿಕ ಕಾರ್ಯಕ್ರಮ ಪುತ್ತೂರು ಜಗದೀಶ್ ಆಚಾರ್ಯ ಇವರಿಂದ ಸಂಗೀತ ಗಾನ ಸಂಭ್ರಮ ಹಾಗೂ ವೀರಭದ್ರ ಸ್ವಾಮಿ ದಶಾವತಾರ ಯಕ್ಷಗಾನ ಮಂಡಳಿ ಹಿರಿಯಡ್ಕ ಇವರಿಂದ ಮಾಯೊದ ಅಜ್ಜೆ ಯಕ್ಷಗಾನ ಬಯಲಾಟ ಜರಗಿತು ಜಾತ್ರಾಮಹೋತ್ಸವ ಯಶಶ್ವಿಗೆ ವ್ಯವಸ್ಥಾಪನಾ ಸಮಿತಿ ಸದಸ್ಯರು ವಿಜಯ ಸಾಲಿಯನ್ ಪಣಕಜೆ. ಎಸ್ ಗಂಗಾಧರ ರಾವ್ ಕೆವುಡೇಲು.ರಾಜ್ ಪ್ರಕಾಶ್ ಪಡ್ಡೈಲು. ನೇಹಾ (ಅಶ್ವಿನಿ)ನಾಯಕ್ ಪಣಕಜೆ. ಭಜನಾ ಸಮಿತಿ ಕಾರ್ಯದರ್ಶಿ ಕುಶಾಲಪ್ಪ ಕಿನ್ನಿಗೋಳಿ. ಯುವ ಸಮಿತಿ ಕಾರ್ಯದರ್ಶಿ ಹರೀಶ್ ಕೋಟ್ಯಾನ್ ಮದ್ದಡ್ಕ. ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಪುರಿಪಟ್ಟ ಕೋಶಾಧಿಕಾರಿ. ವಸಂತ ಗೌಡ ವರಕಬೆ ಮಾತ್ರ ಮಂಡಳಿ ಕಾರ್ಯದರ್ಶಿ ದೀಕ್ಷಾ ಸದಾನಂದ. ದೇವಸ್ಥಾನದ ಕಾರ್ಯನಿರ್ವಾಕ ವಿಕಾಸ್ ಶೆಟ್ಟಿ ಎಲ್ಲಾ ಸಮಿತಿಗಳ ಸದಸ್ಯರು ಭಕ್ತಾಭಿಮಾನಿಗಳು ಸಹಕರಿಸಿದರು ಫೆ 4ರಂದು ಬೆಳಿಗ್ಗೆ ಸಂಪ್ರೋಕ್ಷಣಾ ವಿಧಿ ಮಹಾಪೂಜೆ ವೈದಿಕ ಮಂತ್ರಾಕ್ಷತೆ ಜರಗಿತು

Related posts

ಕಬಡ್ಡಿ ಪಂದ್ಯಾಟ: ಉರುವಾಲು ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಅಳದಂಗಡಿ ಅರಮನೆಗೆ ಭೇಟಿ ನೀಡಿ ಅರಸರಿಂದ ಆಶೀರ್ವಾದ ಪಡೆದ ಕ್ಯಾಪ್ಟನ್ ಬ್ರಿಜೇಶ್ ಚೌಟ

Suddi Udaya

ಎರಡು ವರ್ಷಗಳ ಹಿಂದೆ ನಡೆದಿದ್ದ ಮನೆ ಕಳವು ಪ್ರಕರಣ ಭೇದಿಸಿದ ಬೆಳ್ಳಾರೆ ಪೊಲೀಸರು: ಆರೋಪಿ ನೆರಿಯದ ಶರತ್ ಬಂಧನ

Suddi Udaya

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಮತ ಎಣಿಕೆ : 3781 ಮತಗಳ ಮೂಲಕ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಮುನ್ನಡೆ

Suddi Udaya

ಪಂಚ ಗ್ಯಾರಂಟಿ: ತಾಲೂಕು ಮಟ್ಟದ ಅನುಷ್ಠಾನ ಸಮಿತಿ ಸಭೆ ಜನಸ್ಪಂದನ ಸಭೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುದಾನದ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚನೆ

Suddi Udaya

ನ್ಯಾಯತರ್ಪು: ಜಾರಿಗೆಬೈಲು ಮಸೀದಿ ಬಳಿ ತಂಡಗಳ ನಡುವೆ ಹಲ್ಲೆ: ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya
error: Content is protected !!