ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸ್ವಯಂಸೇವಕರಾಗಿ ಸೇವೆ

Suddi Udaya

ಕಣಿಯೂರು: ಫೆ 20 ಕಣಿಯೂರು ವಿಪತ್ತು ನಿರ್ವಹಣಾ ಶೌರ್ಯ ಘಟಕದ ಸ್ವಯಂಸೇವಕರಿಂದ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಕಾರ್ಯಕ್ರಮದ ಸ್ವಯಂಸೇವಕರಾಗಿ ಸೇವೆ ಸಲ್ಲಿಸಲಾಯಿತು.


ಈ ಸಂಧರ್ಭದಲ್ಲಿ ಶಾಸಕರಾದ ಹರೀಶ್ ಪೂಂಜ,ಬ್ರಹ್ಮಕಲಶೋತ್ಸವ ಕಾರ್ಯಾಧ್ಯಕ್ಷರಾದ ಜಯಂತ ಕೋಟ್ಯಾನ್,ಯೋಜನಾಧಿಕಾರಿ ಯಶವಂತ್ ಮೆಚ್ಚುಗೆ ವ್ಯಕ್ತಪಡಿಸಿದರು. ಗುರುವಾಯನಕೆರೆ ಶೌರ್ಯ ಘಟಕ ಮಾಸ್ಟರ್ ಶ್ರೀಕಾಂತ್ ಪಟವರ್ಧನ್ ,ಕಣಿಯೂರು ಘಟಕ ಸಂಯೋಜಕರಾದ ಶ್ರೀಮತಿ ಚಂದ್ರಕಲಾ,ಘಟಕ ಪ್ರತಿನಿಧಿ ಗಿರೀಶ್ ಗೌಡ ಬಿ.ಕೆ ಮೈರೋಳ್ತಡ್ಕ, ದಿನೇಶ್ ಗೌಡ ಖಂಡಿಗ,ಶ್ರೀಮತಿ ವಿಮಲಾ,ಶ್ರೀಮತಿ ಲತಾ,ರತನ್ ಕುಮಾರ್,ಆನಂದ ಗೌಡ,ಉಮೇಶ್ ಗೌಡ ,ರೋಹಿತ್ ಶೆಟ್ಟಿ, ಶರತ್,ಲೋಕೇಶ್‌ ಮೂಲ್ಯ,ಸುಂದರ ಪೈರೊಟ್ಟು,ಸುರೇಶ್ ಸೇವಾಕಾರ್ಯದಲ್ಲಿ 13 ಜನ ಸ್ವಯಂಸೇವಕರು ಭಾಗವಹಿಸಿದರು. ಸ್ವಯಂಸೇವಕರಿಗೆ ಸಮಿತಿಯವರು ಗೌರವಿಸಿದರು.

Leave a Comment

error: Content is protected !!