ಕಣಿಯೂರು ನಾರಾಯಣ ಕುಟುಂಬಕ್ಕೆ ಸಹಾಯಧನ

Suddi Udaya

ಕಣಿಯೂರು:ಸೇವೆಯೇ ಸಂಘಟನೆ ಎನ್ನುವ ಧ್ಯೇಯ ವಾಕ್ಯದೊಂದಿಗೆ ಕೆಲಸ ಮಾಡುತ್ತಿರುವ ನಮ್ಮ ಯುವಕೇಸರಿ ಕಣಿಯೂರು ಇದರ ವತಿಯಿಂದ ಮೊದಲ ಸೇವಾ ಯೋಜನೆಯ ಮೂಲಕ ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ಕಾಪಿಗುಡ್ಡೆಯಲ್ಲಿ ತೀರಾ ಬಡತನ ಮತ್ತು ಅಸೌಖ್ಯ ದಿಂದ ಜೀವನ ನಡೆಸುತ್ತಿರುವ ನಾರಾಯಣ ನಾಯ್ಕರವರ ಕುಟುಂಬಕ್ಕೆ 10,000/- ರೂಪಾಯಿಯ ಸಹಾಯಧನವನ್ನು ನೀಡಲಾಯಿತು.


ಈ ಸಂಧರ್ಭದಲ್ಲಿ ಯುವಕೇಸರಿ ಕಣಿಯೂರು ಇದರ ಗೌರವಾದ್ಯಕ್ಷ ರಕ್ಷಿತ್ ಪಣೆಕ್ಕರ, ಅದ್ಯಕ್ಷರಾದ ಪ್ರವೀಣ್ ಗೌಡ ಅಲೆಕ್ಕಿ, ಕಾರ್ಯದರ್ಶಿ ಯತೀಶ್ ಪಣೆಕ್ಕರ, ಅವಿನ್ ಕೊಲ್ಲೊಟ್ಟು, ದೇವರಾಜ್ ಪೂಜಾರಿ,ದಿನೇಶ್ ನಾಯ್ಕ್,ಚರಣ್ ಪೂಜಾರಿ . ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Leave a Comment

error: Content is protected !!