ಸುಲ್ಕೇರಿ ಬ್ರಹ್ಮ ಶ್ರೀ ಗುರುನಾರಾಯಣ ಸೇವಾ ಸಂಘದಿಂದ ಮನೆ ನಿರ್ಮಾಣಕ್ಕೆ ನೆರವು

Suddi Udaya

ಸುಲ್ಕೇರಿ: ಬ್ರಹ್ಮ ಶ್ರೀ ಗುರುನಾರಾಯಣ
ಸೇವಾ ಸಂಘ ಬ್ರಹ್ಮಗಿರಿ ವತಿಯಿಂದ ಮನೆ ನಿರ್ಮಾಣದ ಕೆಲಸಕ್ಕೆ ಆರ್ಥಿಕ ನೆರವು ಹಸ್ತಾಂತರಿಸಲಾಯಿತು.

ಸಂಘದ ಮಾರ್ಚ್ ತಿಂಗಳ ಮಾಸಿಕ ಸಭೆಯಲ್ಲಿ ಸಂಘದ ಸದಸ್ಯೆ ಸುಜಾತ ಪೂಜಾರ್ತಿಯವರ ಮನೆಯ ಮೇಲ್ಛಾವಣಿ ರಿಪೇರಿಗೆ ರೂ 5 ಸಾವಿರ ಸಹಾಯಹಸ್ತವನ್ನು ನೀಡಿ ಸಹಕರಿಸಲಾಯಿತು‌.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಕೊರಗಪ್ಪ ಪೂಜಾರಿ,ಉಪಾಧ್ಯಕ್ಷರುಗಳಾದ
ಶಂಕರ ಪೂಜಾರಿ,ಯಶೋಧರ ಪೂಜಾರಿ, ಪ್ರಧಾನ ಕಾರ್ಯದರ್ಶಿಡೀಕಯ್ಯಪೂಜಾರಿ,ಕೋಶಾಧಿಕಾರಿ ಹರೀಶ್ ಪೂಜಾರಿ ,ನಿರ್ದೇಶಕರುಗಳಾದ ವಸಂತ ಪೂಜಾರಿ,ಸುನಿಲ್ ಪೂಜಾರಿ ,ಕೀರ್ತನ್ ಪೂಜಾರಿ, ಗುರುರಾಜ್ ಪೂಜಾರಿ
ಪ್ರಕಾಶ್ ಪೂಜಾರಿ ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.

Leave a Comment

error: Content is protected !!