ಕಡಿರುದ್ಯಾವರ :ಎರ್ಮಾಲ್ ಪಲ್ಕೆ ಸರಕಾರಿ ಬಾವಿಯಲ್ಲಿ ಪತ್ತೆಯಾದ ಶವ

Suddi Udaya

ಕಡಿರುದ್ಯಾವರ: ಇಲ್ಲಿನ ಎರ್ಮಾಲ್ ಪಲ್ಕೆ ಎಂಬಲ್ಲಿ ಸರ್ಕಾರಿ ಬಾವಿಯಲ್ಲಿ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾದ ಪ್ರಕರಣ ಬೆಳಕಿಗೆ ‌ಬಂಧಿದೆ.


ಎರ್ಮಾಲ್ ಪಲ್ಕೆಯ ಐದು ಸೆನ್ಸ್ ಕಾಲೋನಿಯಲ್ಲಿ ವಾಸಿಸುತ್ತಿದ್ದ ಪ್ರವೀಣ್ ಎಂಬವರು ಮೃತ ಪಟ್ಟವರು. ಎರಡು ವರ್ಷದಿಂದ ಇವರು ಎರ್ಮಾಲ್ ಪಲ್ಕೆಯಲ್ಲಿ ವಾಸವಿರುವುದಾಗಿ ತಿಳಿದುಬಂದಿದೆ.
ಸ್ಥಳೀಯರುಹೇಳುವ ಪ್ರಕಾರ ಪ್ರವೀಣ್ ಎರ್ಮಾಲ್ ಪಲ್ಕೆ ಅಥವಾ ಕಡಿರುದ್ಯಾವರ ಮೂಲದ ವ್ಯಕ್ತಿ ಅಲ್ಲ ಎನ್ನಲಾಗುತ್ತಿದೆ. ಈಗಾಗಲೇ ಸ್ಥಳೀಯರು, ಗ್ರಾಮ ಪಂಚಾಯತ್ ಮುಖಂಡರು ಸ್ಥಳದಲ್ಲಿದ್ದು ಘಟನೆಯ ಬಗ್ಗೆ ಪರಿಶೀಲನೆ ಮಾಡುತ್ತಿದ್ದಾರೆ.
ಈ ಬಗ್ಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದು, ಸಾವಿನ ಸ್ವಷ್ಟ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.

Leave a Comment

error: Content is protected !!