24.7 C
ಪುತ್ತೂರು, ಬೆಳ್ತಂಗಡಿ
May 18, 2025
ಸಾಧಕರು

ಭಾರತೀಯ ಭೂ ಸೇನೆಯಲ್ಲಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಕರ್ನಲ್ ನಿತಿನ್ ಆರ್. ಭಿಡೆಯವರಿಗೆ ವಿವಿಧ ಸಂಘ-ಸಂಸ್ಥೆಗಳಿಂದ ಅಭಿನಂದನೆ

ಬೆಳ್ತಂಗಡಿ: ಭಾರತೀಯ ಭೂ ಸೇನೆಯಲ್ಲಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಕರ್ನಲ್ ನಿತಿನ್ ಆರ್. ಭಿಡೆಯವರಿಗೆ ಅಭಿನಂದನಾ ಸಮಾರಂಭ ಮಾ.31ರಂದು ಸಂಜೆ ಕುತ್ಯಾರು ದೇವಸ್ಥಾನದ ವಠಾರದಲ್ಲಿ ಜರುಗಿತು.

ಮಾಜಿ ಸೈನಿಕರ ಸಂಘ ಬೆಳ್ತಂಗಡಿ, ರೋಟರಿ ಕ್ಲಬ್ ಬೆಳ್ತಂಗಡಿ, ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಘ, ಕರಾಡ್ಹ ಬ್ರಾಹ್ಮಣ ಸಮಾಜ ಬೆಳ್ತಂಗಡಿ, ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಬೆಳ್ತಂಗಡಿ, ಚಿತ್ಪಾವನ ಬ್ರಾಹ್ಮಣರ ಬಳಗ ಉಜಿರೆ, ಬೆಳ್ತಂಗಡಿ, ಬೆಳ್ತಂಗಡಿ ತಾಲೂಕು ಬ್ರಾಹ್ಮಣ ಸಭಾ, ಕೂಟ ಜಗತತು ಸಾಲಿಗ್ರಾಮ ಅಂಗ ಸಂಸ್ಥೆ ಬೆಳ್ತಂಗಡಿ, ಚಿತ್ಪಾವನ ಸಂಘಟನೆ ಮುಂಡಾಜೆ, ತುಳು ಶಿವಳ್ಳಿ ಸಭಾ ಉಜಿರೆ, ಉಪ್ಪಿನಂಗಡಿ ಹವ್ಯಕ

ಮಂಡಲ ಉಜಿರ ವಲಯ, ಭಿಡೆ ಕುಟುಂಬಸ್ಥರು, ವರ್ತಕರು ಬೆಳ್ತಂಗಡಿ ಇವರು ನಿವೃತ್ತ ಕರ್ನಲ್ ನಿತಿನ್ ಆರ್. ಭಿಡೆಯವರನ್ನು ಹೂ ಹಾರ ಹಾಕಿ ಗೌರವಿಸಿದರು. ನಿತಿನ್ ಆರ್. ಭಿಡೆಯವರು ತನ್ನ ಸೇವಾ ಅವಧಿಯ ಅನುಭವಗಳ ಬಗ್ಗೆ ಮಾತನಾಡಿ, ಸೈನಿಕರಿಗೆ ದೇಶದ ರಕ್ಷಣೆಯೇ ಮುಖ್ಯ ಧ್ಯೇಯವಾಗಿದ್ದು, ಭಾರತ ಮಾತೆಯ ಸೇವೆ ಜೀವನದಲ್ಲಿ ದೊರೆತ ಪುಣ್ಯ ಕಾರ್ಯವಾಗಿದೆ ಎಂದು ಹೇಳಿ, ಅಭಿನಂದಿಸಿದ ಎಲ್ಲಾ ಸಂಘ – ಸಂಸ್ಥೆಯವರಿಗೆ ಕೃತಜ್ಞತೆ ಸಲ್ಲಿಸಿದರು. ಬಾಲಕೃಷ್ಣ ಸಹಸ್ರಬುದ್ಯೆ ದೇಶ ಭಕ್ತಿ

ಹಾಡಿದರು. ಬೆಳ್ತಂಗಡಿ ತಾಲೂಕು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಸುನೀಲ್ ಶೆಣೈ ಸ್ವಾಗತಿಸಿದರು. ನಾವೂರು ಆರೋಗ್ಯ ಕ್ಲಿನಿಕ್ ಡಾ. ಪ್ರದೀಪ್ ಕಾರ್ಯಕ್ರಮ ನಿರೂಪಿಸಿ, ಯೋಗೀಶ್ ಭಿಡೆ ವಂದಿಸಿದರು. ಮೇ|ಜ| ಎಂ.ವಿ ಭಟ್ ಸೇರಿದಂತೆ ನಿವೃತ್ತ ಸೈನಿಕರ ಸಂಘದ ಪದಾಧಿಕಾರಿ, ವಿವಿಧ ಸಂಘಟನೆಗಳ ಮುಖ್ಯಸ್ಥರು, ಪದಾಧಿಕಾರಿಗಳು, ಉಪಸ್ಥಿತರಿದ್ದರು.

Related posts

ಧರ್ಮಸ್ಥಳದಲ್ಲಿ ನವಜೀವನ ಸದಸ್ಯರ ಶತದಿನೋತ್ಸವ: ಕಾರ್ಯಕ್ರಮದ ಅಂಗವಾಗಿ ವ್ಯಸನಮುಕ್ತ ಸಾಧಕರ ಸಮಾವೇಶ

Suddi Udaya

ರಾಜ್ಯೋತ್ಸವ ಪ್ರಶಸ್ತಿಗೆ ಸಹಕರಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರಿಗೆ ದಯಾ ವಿಶೇಷ ಶಾಲೆಯ ವತಿಯಿಂದ ಗೌರವಾರ್ಪಣೆ

Suddi Udaya

ಅನೀಶ್ ಪೂಜಾರಿ ವೇಣೂರು ನಿರ್ದೇಶನದ ಕೊಳಂಬೆ ಕಿರುಚಿತ್ರ “ರೆಡ್ ಇನ್ಕಾರ್ನೇಷನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ-2025” ಪ್ರಶಸ್ತಿಗೆ ಆಯ್ಕೆ

Suddi Udaya

ಎಕ್ಸೆಲ್ ವಿದ್ಯಾ ಸಂಸ್ಥೆಗಳ ಸುಮಂತ್ ಕುಮಾರ್ ಜೈನ್‌ರವರಿಗೆಮಲೇಷಿಯಾ-ಇಂಡಿಯಾ ಅಂತರಾಷ್ಟ್ರೀಯ ಪ್ರಶಸ್ತಿ

Suddi Udaya

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಕನ್ಯಾನ ಸದಾಶಿವ ಶೆಟ್ಟಿ ಆಯ್ಕೆ

Suddi Udaya

ರಿಷಿಕಾ ಕುಂದೇಶ್ವರರಿಗೆ ಕುರಿಯ ವಿಠಲ ಶಾಸ್ತ್ರಿ ಪ್ರತಿಭಾ ಪುರಸ್ಕಾರ

Suddi Udaya
error: Content is protected !!