ಮುಂಡಾಜೆ ಬಂಟರ ಗ್ರಾಮ ಸಮಿತಿ ಸಭೆ

Suddi Udaya

ಮುಂಡಾಜೆ:ಬಂಟರ ಗ್ರಾಮ ಸಮಿತಿ ಮುಂಡಾಜೆ ಇದರ ಮಾಸಿಕ ಸಭೆಯು ಎ.2ರಂದು ಗಣೇಶ ಶೆಟ್ಟಿ, ಶಿವ ಕೃಪ, ಸೋಮಂತಡ್ಕ,ಇವರ ಮನೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಕ್ರೀಡಾ ಸಾಧಕರಾದ ಸಂತೋಷ್ ಮಾಡ ಹಾಗೂ ಕಲಾ ಸಾಧಕರಾದ , ಕಟೀಲು ಮೇಳದ ಕಲಾವಿದ ನವೀನ್ ಶೆಟ್ಟಿ, ನಾರಾಯಣ ಶೆಟ್ಟಿ ಮಂಜಶ್ರೀ ನಗರ ಮತ್ತು ಪ್ರಸಾದ್ ಶೆಟ್ಟಿ ಮಂಜುಶ್ರೀ ನಗರ ಇವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಪುರುಷೋತ್ತಮ ಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ಸಂಚಾಲಕರಾದ ವಿಶ್ವನಾಥ ಶೆಟ್ಟಿ ಮುಂಡ್ರುಪಾಡಿ, ಗೌರವಾಧ್ಯಕ್ಷ ರಾಮಣ್ಣ ಶೆಟ್ಟಿ ಅಗರಿ, ಕೋಶಾಧಿಕಾರಿ ಜಯಾನಂದ ಶೆಟ್ಟಿ ಮುಂಡ್ರುಪಾಡಿ , ಪುಷ್ಪರಾಜ ಶೆಟ್ಟಿ ಕಲ್ಲಹಿತ್ಲು, ಗಣೇಶ ಶೆಟ್ಟಿ ಸೋಮಂತಡ್ಕ, ಸುಮ ಶೆಟ್ಟಿ ನೈಯಲ್ ಇವರುಗಳು ಉಪಸ್ಥಿತರಿದ್ದರು. ಹರ್ಷಿತ್ ಶೆಟ್ಟಿ ಅವರು ಸ್ವಾಗತಿಸಿ, ಪ್ರತಿಕ್ ಕುಮಾರ್ ರೈ
ಧನ್ಯವಾದ ವಿತ್ತರು
ನಾರಾಯಣ ಶೆಟ್ಟಿ ಮಂಜುಶ್ರೀ ನಗರ ಇವರು ಪ್ರಾರ್ಥಿಸಿ, ನವೀತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಬಂಟ ಬಂಧುಗಳು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

Leave a Comment

error: Content is protected !!