ನಾರಾವಿ ಜನಜಾಗೃತಿ ವಲಯಾಧ್ಯಕ್ಷರ ಆಯ್ಕೆ ಸಭೆ ಜನಜಾಗೃತಿಯ ನೂತನ ವಲಯಾಧ್ಯಕ್ಷರಾಗಿ ಮೋಹನ್ ಅಂಡಿಂಜೆ ಆಯ್ಕೆ

Suddi Udaya

ನಾರಾವಿ: ಸೂರ್ಯನಾರಾಯಣ ದೇವಸ್ಥಾನದಲ್ಲಿ ಜನಜಾಗೃತಿ ವಲಯಾಧ್ಯಕ್ಷರ ಆಯ್ಕೆ ಸಭೆಯು ನಡೆಯಿತು.

ಈ ಸಭೆಯಲ್ಲಿ ಜನಜಾಗೃತಿ ವಲಯಾಧ್ಯಕ್ಷರಾದ ನಿತ್ಯಾನಂದ ನಾವರ, ತಾಲೂಕು ಯೋಜನಾಧಿಕಾರಿ ಯಶವಂತ್ ಸರ್, ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಸದಾನಂದ ಬಂಗೇರ, ಹಾಗೂ ತಾಲೂಕು ಜನಜಾಗೃತಿ ಸಮಿತಿಯ ಸದಸ್ಯರಾದ ಮೋಹನ್ ಅಂಡಿಂಜೆ, ಸದಾನಂದ ಗೌಡ, ಜಯರಾಜ್ ಹೆಗ್ಡೆ , ವಲಯದ ಮೇಲ್ವಿಚಾರಕರಾದ ದಮಯಂತಿ ಮೇಡಂ, ಒಕ್ಕೂಟದ ಅಧ್ಯಕ್ಷರುಗಳು, ಗ್ರಾಮ ಸಮಿತಿ ಅಧ್ಯಕ್ಷರುಗಳು, ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

ನಂತರ ನೂತನ ಜನಜಾಗೃತಿ ಸಮಿತಿಯನ್ನು ರಚಿಸಲಾಯಿತು. ಇದರಲ್ಲಿ ನಿತ್ಯಾನಂದ ನಾವರ, ಮೋಹನ್ ಅಂಡಿಂಜೆ, ಸದಾನಂದ ಗೌಡ, ಜಯರಾಜ್ ಹೆಗ್ಡೆ, ರಾಜು ಶೆಟ್ಟಿ, ವಸಂತ ಗುಣನಿಲ, ರತ್ನಾಕರ, ಆನಂದ ಶೆಟ್ಟಿ, ಆಯ್ಕೆ ಮಾಡಲಾಯಿತು. ನೂತನ ಜನಜಾಗೃತಿ ವಲಯಾಧ್ಯಕ್ಷರಾಗಿ ಮೋಹನ್ ಅಂಡಿಂಜೆ ಇವರನ್ನು ಆಯ್ಕೆ ಮಾಡಲಾಯಿತು. ನಿತ್ಯಾನಂದ ನಾವರ ಮತ್ತು ಮೋಹನ್ ಅಂಡಿಂಜೆ ಇವರು ಜನಜಾಗೃತಿ ಬಗ್ಗೆ ಮಾತನಾಡಿದರು.

ಕೊಕ್ರಾಡಿ ಸಾವ್ಯದ ಸೇವಾ ಪ್ರತಿನಿಧಿ ಶಶಿಧರ್ ಕುಲಾಲ್ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಯಶವಂತ್ ಇವರು ಮಾತನಾಡಿದರು. ದಮಯಂತಿ ವಂದಿಸಿದರು.

Leave a Comment

error: Content is protected !!