ಅಳದಂಗಡಿಯಲ್ಲಿ ಮಕ್ಕಳ ಸಮ್ಮೇಳನ: ವಿಜಯ್ ಕುಮಾರ್ ಜೈನ್ ನೇತೃತ್ವದಲ್ಲಿ, ಯಕ್ಷಗಾನ ಸಂಭ್ರಮ,ಕುಣಿತ ಭಜನೆ, ಜನಪದ ಉತ್ಸವ

Suddi Udaya

ಅಳದಂಗಡಿ : ಆಮಂತ್ರಣ ಪರಿವಾರ ಸಾರಥ್ಯದಲ್ಲಿ, ಸತ್ಯದೇವತಾ ದೈವಸ್ಥಾನ ಅಳದಂಗಡಿ , ಕರ್ನಾಟಕ ಜಾನಪದ ಪರಿಷತ್ ದ.ಕ ಜಿಲ್ಲಾ ಘಟಕ ಹಾಗೂ ಸುರೇಶ್ ಪೂಜಾರಿ ಅಭಿಮಾನಿ ಬಳಗ ಇವರ ಸಹಕಾರದಲ್ಲಿ ಎ.14 ರಂದು ಬಡಗಕಾರಂದೂರು ಸ.ಉನ್ನತೀಕರಿಸಿದ ಶಾಲೆಯಲ್ಲಿ ಆಮಂತ್ರಣ ಮಕ್ಕಳ ಸಮ್ಮೇಳನ ಜರಗಿತು.

ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲರು ಮತ್ತು ಧಾರ್ಮಿಕ ಪರಿಷತ್ ಸದಸ್ಯರಾದ ದೇವೆಂದ್ರ ಹೆಗ್ಡೆ ಕೊಕ್ರಾಡಿ ಆಮಂತ್ರಣ ಸಮ್ಮೇಳನದ ಉದ್ಘಾಟನೆ ನೆರವೇರಿಸಿದರು.

ಶ್ಲಾಘ ಸಾಲಿಗ್ರಾಮ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜೇಸಿ ಕಿರಣ್ ಶೆಟ್ಟಿ, ಕಲಾ ಪೋಷಕಾರದ ಬಿ .ಭುಜಬಲಿ ಧರ್ಮಸ್ಥಳ, ವೇಣೂರು ಸಿ.ಎ.ಬ್ಯಾಂಕ್ ಆಧ್ಯಕ್ಷ ಸುಂದರ ಹೆಗ್ಡೆ , ಶಾಲಾ ಮಖ್ಯೋಪಾಧ್ಯರಾದ ಸುರೇಶ್, ಪ್ರಕಾಶ್ ಆಚಾರ್ಯ ಮೂಡಬಿದ್ರೆ, ರಾಕೇಶ್ ಪೊಳಲಿ, ಪ್ರಸಾದ್ ನಾಯಕ್ ಕಾರ್ಕಳ ಉಪಸ್ಥಿತರಿದ್ದರು.

ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಸ್ವಾಗತಿಸಿದರು. ಆದ್ಯ ಕಾರ್ಕಳ ಪ್ರಾರ್ಥಿಸಿದರು. ಶ್ರೇಯಾ ಎಂ.ಜಿ.ಸುಳ್ಯ ನಿರೂಪಿಸಿದರು.

Leave a Comment

error: Content is protected !!