ಧರ್ಮಸ್ಥಳ: ನಾರ್ಯ ತಂಗಾಯಿ ಅರಣ್ಯದಲ್ಲಿ ಬೆಂಕಿ

Suddi Udaya

ಉಜಿರೆ, ಬೆಳಾಲು ಹಾಗೂ ಧರ್ಮಸ್ಥಳ ಗ್ರಾಮದ ಗಡಿ ಪ್ರದೇಶವಾದ ನಾರ್ಯ ತಂಗಾಯಿ ಎಂಬಲ್ಲಿ ಅರಣ್ಯದಲ್ಲಿ ಬೆಂಕಿ ಪ್ರಕರಣ ಉಂಟಾದ ಘಟನೆ ಎ.19 ರಂದು ನಡೆದಿದೆ.

ಅರಣ್ಯ ಕ್ಷೇತ್ರದ ನಡುತೋಪಿನ ಮೂಲಕ ಪ್ರವೇಶಿಸಿದ ಬೆಂಕಿ ಸುಮಾರು ಒಂದು ಕಿಮೀ.ಯಷ್ಟು ವ್ಯಾಪ್ತಿಗೆ ಹರಡಿದೆ. ಬೆಂಕಿ ನಂದಿಸುವಲ್ಲಿ ಇಲಾಖೆಯ ಡಿ ಆರ್ ಎಫ್ ಒ ಹರಿಪ್ರಸಾದ್, ಅರಣ್ಯ ಗಸ್ತು ರಕ್ಷಕರಾದ ಶರತ್, ಸಂತೋಷ್, ಸದಾನಂದ ಸ್ಥಳೀಯರಾದ ಸುಧಾಕರ, ಮಹೇಶ ವಿಜಯ್ ಶೆಟ್ಟಿ ಇವರ ತಂಡ ಹಾಗೂ ಅಗ್ನಿಶಾಮಕ ದಳದವರು ಸಹಕರಿಸಿದರು.

Leave a Comment

error: Content is protected !!