ಪ.ರಾ. ಶಾಸ್ತ್ರಿ ಅಭಿನಂದನಾ ಸಮಿತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಭೇಟಿ

Suddi Udaya

ಬೆಳ್ತಂಗಡಿ: ಪ.ರಾ. ಶಾಸ್ತ್ರಿ ಅಭಿನಂದನಾ ಸಮಿತಿ ವತಿಯಿಂದ ಪೂರ್ವ ನಿಗದಿಯಂತೆ ಇಂದು (ಎ.22 ರಂದು) ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಲಾಯಿತು.

ಡಾ. ಹೆಗ್ಗಡೆಯವರು ಪೂರ್ಣ ಮನಸ್ಸಿನಿಂದ ಕಾಯ೯ಕ್ರಮಕ್ಕೆ ಬರಲು ಒಪ್ಪಿದ್ದು , ಅವರ ಸಲಹೆಯಂತೆ ಕಾರ್ಯಕ್ರಮದ ದಿನಾಂಕ ಬದಲಾಯಿಸಲಾಗಿದ್ದು, ಜುಲೈ 8 ಶನಿವಾರ ಅಪರಾಹ್ನ 2ರ ನಂತರ ನಡೆಸುವುದೆಂದು ನಿಧ೯ರಿಸಲಾಗಿದೆ‌ .

ಡಾ. ಹೆಗ್ಗಡೆ ಭೇಟಿ ವೇಳೆ ಸಮಿತಿ ಸಂಚಾಲಕ ಸಂಪತ್ ಸುವರ್ಣ, ಅಶೋಕ್ ಭಟ್ ಉಜಿರೆ, ಭುಜಬಲಿ ಧರ್ಮಸ್ಥಳ, ಡಾ. ಭಾಸ್ಕರ ಹೆಗಡೆ, ಡಾ. ಶ್ರೀನಾಥ್ ಎಂ.ಪಿ., ಜಯಶಂಕರ ಶರ್ಮ, ಪ್ರಶಾಂತ್ ಬಳಂಜ,ದಯಾನಂದ ಬೆಳಾಲು, ಲಕ್ಷ್ಮೀ ಮಚ್ಚಿನ ಉಪಸ್ಥಿತರಿದ್ದರು.

Leave a Comment

error: Content is protected !!