24.6 C
ಪುತ್ತೂರು, ಬೆಳ್ತಂಗಡಿ
May 18, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿ

ಕೊಕ್ಕಡ ಪ್ರೌಢ ಶಾಲೆಯಿಂದ ರೂ. 3.20 ಲಕ್ಷ ಮೌಲ್ಯದ ಬ್ಯಾಟರಿ ಕಳವು ಮಾಡಿದ ಮೂವರ ಬಂಧನ

ಕೊಕ್ಕಡ: ಕಳೆದ ಮಾರ್ಚ್‌ನಲ್ಲಿ ಇಲ್ಲಿಯ ಸರಕಾರಿ ಪ್ರೌಢ ಶಾಲೆಗೆ ನುಗ್ಗಿ ಶಾಲೆಯೊಳಗೆ ಇದ್ದ ಸುಮಾರು ರೂ. 3.20 ಲಕ್ಷ ಮೌಲ್ಯದ ಆ ನಿರುಪಯುಕ್ತ ಬ್ಯಾಟರಿಗಳನ್ನು ಕಳವು ಮಾಡಿದ ಮೂವರು ಆರೋಪಿಗಳನ್ನು ಧರ್ಮಸ್ಥಳ ಪೊಲೀಸರು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಮಾ. 27ರಂದು ಯಾರೋ ಕಳ್ಳರು ಶಾಲೆಯ ಒಳಗೆ ನುಗ್ಗಿ ಕೊಠಡಿಯಲ್ಲಿದ್ದ ನಿರುಪಯುಕ್ತರ ಬ್ಯಾಟರಿಯನ್ನು ಕಳವು ಮಾಡಿದ ಬಗ್ಗೆ ಪ್ರಭಾರ ಮುಖ್ಯೋಪಾಧ್ಯಾಯ ಹಲ್ಲಿಂಗೇರಿ ಪ್ರಭಾಕರ ನಾಯ್ಕ ಅವರು ಧರ್ಮಸ್ಥಳ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಕೈಗೊತ್ತಿಕೊಂಡ ಪೊಲೀಸರು ಇದೀಗ ಆರೋಪಿಗಳಾದ ರಕ್ಷಿತ್ ಡಿ ( 24 ವರ್ಷ) ಬೋಲ ಮನೆ ಕುಟ್ರಪಾಡಿ ಕಡಬ, ತೀರ್ದ ಎಂ(29 ವರ್ಷ) ಮೀನಾಡಿಮನೆ, ಕುಟ್ರಪಾಡಿ, ಯದ್ದೇಶ್ ಯು.ಕೆ (30 ವರ್ಷ) ಉರುಂಬಿ ಮನೆ, ಕುಟ್ರಪಾಡಿ, ಲೋಹಿತ್ ಹೆಚ್. ಶೆಟ್ಟಿ (23 ವರ್ಷ) ಹಳ್ಳಿಮನೆ, ಗ್ರಾಮ, ಕಡಬ ಅಂಚೆ, ಕಡಬ ತಾಲೂಕು ರವರುಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಆರೋಪಿಗಳು ಉಪ್ಪಿನಂಗಡಿಯ ನಾಲ್ಕು ಸರಕಾರಿ ಶಾಲೆಗಳಿಂದ, ಸುಬ್ರಹ್ಮಣ್ಯದ ಎರಡು ಸರಕಾರಿ ಶಾಲೆಗಳಿಂದ, ಪುತ್ತೂರಿನ ಒಂದು ಶಾಲೆಯಿಂದ, ಬಂಟ್ವಾಳದ ಒಂದು ಶಾಲೆ ಮತ್ತು ಧರ್ಮಸ್ಥಳದ ಒಂದು ಶಾಲೆಯಿಂದ ಸೇರಿದಂತೆ ದ.ಕ ಜಿಲ್ಲೆಯ 39 ಸರಕಾರಿ ಪ್ರೌಢ ಶಾಲೆಗಳಿಂದ ಸುಮಾರು ರೂ. 2ಲಕ್ಷ ಮೌಲ್ಯದ ಬ್ಯಾಟರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳಿಂದ ರೂ. 1 ಲಕ್ಷದ ಮಾರುತಿ ಅಲ್ಟೋ ಕಾರು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಕಬ್ಬಿಣದ ಲಿವರ್, ಕಟ್ಟಿಂಗ್ ಪ್ಲೇಯರ್, ಅಕ್ಸೋ ಬೇಡ್, ಟಾರ್ಚ್, ಟೋಪಿ, ಸೇರಿದಂತ ಅಂದಾಜು ಮೌಲ್ಯ ರೂ.3 ಲಕ್ಷದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಪತ್ತೆಗಾಗಿ ಎಸ್.ಪಿ ಡಾ| ವಿಕ್ರಮ್ ಅಮಟೆ ಐ.ಪಿ.ಎಸ್ ರವರ ನಿರ್ದೇಶನದಂತೆ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಧರ್ಮಪ್ಪ ಎನ್.ಎಂ. ಬಂಟ್ವಾಳ ಡಿ.ವೈ.ಎಸ್.ಪಿ ಪ್ರತಾಪ್ ಸಿಂಗ್ ಥೋರಾಟ ಮತ್ತು ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ಶ್ರೀ ಶಿವಕುಮಾರ ಬಿ ರವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಪೊಲೀಸ್ ಠಾಣಾ ಪಿ.ಎಸ್.ಐ (ಕಾ.ಸು) ಅನೀಲಕುಮಾರ ಡಿ. ಪಿ.ಎಸ್.ಐ (ತನಿಖೆ) ರೇಣುಕ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ವಿ.ಎಸ್.ಐ ಸ್ಯಾಮುವೆಲ್, ರಾಜೇಶ್, ಪ್ರಶಾಂತ, ಸತೀಶ ನಾಯ್ಕ ಲಾರೆನ್ಸ್ ಪಿ.ಆರ್, ಕೃಷ್ಣಪ್ಪ, ಶೇಖರ ಗೌಡ, ಮಂಜುನಾಥ, ಪ್ರಮೋದಿನಿ, ಅನಿಲ್ ಕುಮಾರ್, ಜಗದೀಶ, ಹರೀಶ್, ನಾಗರಾಜ, ರಾಧಾ ಕೋಟ್ಯಾನ್ ಮತ್ತು ವಾಹನ ಚಾಲಕ ಲೋಕೇಶ್ ಸಹಕರಿಸಿದ್ದರು.

Related posts

ಭಾರೀ ಮಳೆಗೆ ಕಾಯರ್ತಡ್ಕ ಮೈರಾರ್ ‍ನಲ್ಲಿ ಸೇತುವೆ ಮುಳುಗಡೆ

Suddi Udaya

ಬೆಳ್ತಂಗಡಿಯ ಮೂವರ ಸಜೀವ ದಹನ ಪ್ರಕರಣ: ವಿಧಾನ ಪರಿಷತ್ ಸದಸ್ಯರನ್ನು ಭೇಟಿಯಾದ ಎಸ್‌ಡಿಪಿಐ ಮುಖಂಡರ ನಿಯೋಗ

Suddi Udaya

ಬಂದಾರು ಪರಿಸರದಲ್ಲಿ ಗಜ ಹೆಜ್ಜೆ: ಒಂದುವಾರದಿಂದ ಒಂಟಿಸಲಗದ ಸಂಚಾರ

Suddi Udaya

ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರ ಆಪ್ತ ಕಾರ್ಯದರ್ಶಿಯಾಗಿ ಮಂಜುನಾಥ ಎಂ. ಮರುನೇಮಕ

Suddi Udaya

ಯುಗಳ ಮುನಿಶ್ರೀಗಳ ದೀಕ್ಷಾ ಮಹೋತ್ಸವದ ರಜತ ಸಂಭ್ರಮ ಬೆಳಿಗ್ಗೆ ಭಗವಾನ್ ಬಾಹುಬಲಿ ಸ್ವಾಮಿಗೆ ಮಸ್ತಕಾಭಿಷೇಕ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶಿವಾನಂದ ಪ್ರಭು ಅವರಿಗೆ ಶ್ರದ್ಧಾಂಜಲಿ

Suddi Udaya
error: Content is protected !!