ಅಭಿವೃದ್ಧಿ ಆಧಾರಿತ ರಾಜಕಾರಣಕ್ಕೆ ಮನಸೋತು ಬಿಜೆಪಿ ಸೇರಿದ ಕಾಂಗ್ರೆಸ್ ಮುಖಂಡರು

Suddi Udaya

Updated on:

ಬೆಳ್ತಂಗಡಿ ವಿಧಾಸಭಾ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಬಿಜೆಪಿ ಪಕ್ಷ ಸ್ಪಷ್ಟ ಮೇಲುಗೈ ಸಾಧಿಸುತ್ತಿದ್ದು ಹತ್ತಾರು ಕಾಂಗ್ರೆಸ್ ಮುಖಂಡರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ತೊರೆದು ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ.

ಮೇ 5 ರಂದು ಶಾಸಕ ಹರೀಶ್ ಪೂಂಜ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಮುಖಂಡರು ಹಾಗೂ ಸಕ್ರಿಯ ಕಾರ್ಯಕರ್ತರಾದ ರಾಜೇಶ್ ರಾವ್ ಅಳದಂಗಡಿ, ಕೃಷ್ಣ ಮೂಲ್ಯ ಸೋಣಂದೂರು, ದಿನೇಶ್ ಮೂಲ್ಯ ಸೋನಂದೂರು, ದೇಜಪ್ಪ ಮೂಲ್ಯ ಸೋನಂದೂರು, ಸತೀಶ್ ಅಳದಂಗಡಿ, ಪ್ರಶಾಂತ್ ರಾವ್ ಅಳದಂಗಡಿ, ಹರೀಶ್ ಹರಿಜನ ಅಳದಂಗಡಿ, ಚಂದ್ರಶೇಖರ ಪೂಜರಿ ಕುದ್ಯಾಡಿ, ಆನಂದ ಆಚಾರಿ ಬಳಂಜ, ಚಂದು ಮೂಲ್ಯ ಶಿರ್ಲಾಲು, ಕುಟ್ಟಿ ಶೆಟ್ಟಿ ಅಳದಂಗಡಿ, ಮಾಲಿಂಗ ಹರಿಜನ ಸೂಳಬೆಟ್ಟು, ಚಂದು ನಾಯ್ಕ ಶಿರ್ಲಾಲುರವರು ಬಿಜೆಪಿಗೆ ಸೇರ್ಪಡೆಗೊಂಡರು.

Leave a Comment

error: Content is protected !!