ಉಜಿರೆ : ಅಲ್-ಅಮೀನ್ ಯಂಗ್-ಮೆನ್ಸ್ ವತಿಯಿಂದ ಮಕ್ಕಳ ಸುನ್ನತ್ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಅಲ್-ಅಮೀನ್ ಯಂಗ್-ಮೆನ್ಸ್ ಹಳೆಪೇಟೆ ಉಜಿರೆ ಇದರ ವತಿಯಿಂದ ಉಜಿರೆ ಪರಿಸರದ 26 ಮಕ್ಕಳ ಸುನ್ನತ್(ಮುಂಜಿ) ಕಾರ್ಯಕ್ರಮ ಮೇ6 ರಂದು ನಡೆಯಿತು.
ಸಮಾರಂಭದಲ್ಲಿ ಯಂಗ್-ಮೆನ್ಸ್ ಅಧ್ಯಕ್ಷರಾದ ಶಾಕೀರ್, ಕೇಂದ್ರ ಕಮಿಟಿ ಕಾರ್ಯದರ್ಶಿ ಮಹಮ್ಮದ್ , ಜೊತೆ ಕಾರ್ಯದರ್ಶಿ ಯುಕೆ ಹನೀಫ್, ಜಮಾತ್ ಸದಸ್ಯರದ ಅಬೂಬಕ್ಕರ್ ಸುಪ್ರೀಂ, ಅಶ್ರಫ್ ಎಮ್.ಹೆಚ್, ಕೇಂದ್ರ ಕಮಿಟಿಯ ಕೋಶಾಧಿಕಾರಿ ಇಬ್ರಾಹಿಂ ವಾಫಿರ್, ಮಹಮ್ಮದ್ ಹಾಜಿ ಕಲ್ಯಾಣ್ ಪುರ, ಅಬೂಬ್ಬಕರ್ ಸುಪ್ರೀಂ , ಡಾ. ಸಿದ್ದೀಕ್ ಅಡ್ಡುರ್,ಸಹಾಯಕರಾದ ರಹಿಮಾನ್ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ವೈದ್ಯಕೀಯ ಸಂಪೂರ್ಣ ವೆಚ್ಚವನ್ನು ಅಬ್ದುಲ್ ರಹಿಮಾನ್ ಅಸಿಸ್ಟೆಂಟ್ ಕಮಿಷನರ್ ವಹಿಸಿಕೊಂಡಿದ್ದರು . ಮುಂಜಿ ಮಾಡಿಸಿದ ಮಕ್ಕಳಿಗೆ ಉಡುಪನ್ನು ಮಹಮ್ಮದ್ ಕಲ್ಯಾಣ್ ಪುರ ನೀಡಿದರು. ಬೆಳಗಿನ ಉಪಹಾರ ವ್ಯವಸ್ಥೆಯನ್ನು ಕೇಂದ್ರ ಕಮಿಟಿ ಅಧ್ಯಕ್ಷರಾದ ಬಿ.ಎಂ. ಹಮೀದ್ ಹಾಜಿ ವ್ಯವಸ್ಥೆ ಮಾಡಿದರು.
ಕಾರ್ಯಕ್ರಮವನ್ನು ಯಂಗ್-ಮೆನ್ಸ್ ಪ್ರಧಾನ ಕಾರ್ಯದರ್ಶಿ ಫಝಲ್ ರಹಿಮಾನ್ ಕೋಯ ನಿರೂಪಿಸಿದ್ದರು.

Leave a Comment

error: Content is protected !!