July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ : ಅಲ್-ಅಮೀನ್ ಯಂಗ್-ಮೆನ್ಸ್ ವತಿಯಿಂದ ಮಕ್ಕಳ ಸುನ್ನತ್ ಕಾರ್ಯಕ್ರಮ

ಬೆಳ್ತಂಗಡಿ: ಅಲ್-ಅಮೀನ್ ಯಂಗ್-ಮೆನ್ಸ್ ಹಳೆಪೇಟೆ ಉಜಿರೆ ಇದರ ವತಿಯಿಂದ ಉಜಿರೆ ಪರಿಸರದ 26 ಮಕ್ಕಳ ಸುನ್ನತ್(ಮುಂಜಿ) ಕಾರ್ಯಕ್ರಮ ಮೇ6 ರಂದು ನಡೆಯಿತು.
ಸಮಾರಂಭದಲ್ಲಿ ಯಂಗ್-ಮೆನ್ಸ್ ಅಧ್ಯಕ್ಷರಾದ ಶಾಕೀರ್, ಕೇಂದ್ರ ಕಮಿಟಿ ಕಾರ್ಯದರ್ಶಿ ಮಹಮ್ಮದ್ , ಜೊತೆ ಕಾರ್ಯದರ್ಶಿ ಯುಕೆ ಹನೀಫ್, ಜಮಾತ್ ಸದಸ್ಯರದ ಅಬೂಬಕ್ಕರ್ ಸುಪ್ರೀಂ, ಅಶ್ರಫ್ ಎಮ್.ಹೆಚ್, ಕೇಂದ್ರ ಕಮಿಟಿಯ ಕೋಶಾಧಿಕಾರಿ ಇಬ್ರಾಹಿಂ ವಾಫಿರ್, ಮಹಮ್ಮದ್ ಹಾಜಿ ಕಲ್ಯಾಣ್ ಪುರ, ಅಬೂಬ್ಬಕರ್ ಸುಪ್ರೀಂ , ಡಾ. ಸಿದ್ದೀಕ್ ಅಡ್ಡುರ್,ಸಹಾಯಕರಾದ ರಹಿಮಾನ್ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ವೈದ್ಯಕೀಯ ಸಂಪೂರ್ಣ ವೆಚ್ಚವನ್ನು ಅಬ್ದುಲ್ ರಹಿಮಾನ್ ಅಸಿಸ್ಟೆಂಟ್ ಕಮಿಷನರ್ ವಹಿಸಿಕೊಂಡಿದ್ದರು . ಮುಂಜಿ ಮಾಡಿಸಿದ ಮಕ್ಕಳಿಗೆ ಉಡುಪನ್ನು ಮಹಮ್ಮದ್ ಕಲ್ಯಾಣ್ ಪುರ ನೀಡಿದರು. ಬೆಳಗಿನ ಉಪಹಾರ ವ್ಯವಸ್ಥೆಯನ್ನು ಕೇಂದ್ರ ಕಮಿಟಿ ಅಧ್ಯಕ್ಷರಾದ ಬಿ.ಎಂ. ಹಮೀದ್ ಹಾಜಿ ವ್ಯವಸ್ಥೆ ಮಾಡಿದರು.
ಕಾರ್ಯಕ್ರಮವನ್ನು ಯಂಗ್-ಮೆನ್ಸ್ ಪ್ರಧಾನ ಕಾರ್ಯದರ್ಶಿ ಫಝಲ್ ರಹಿಮಾನ್ ಕೋಯ ನಿರೂಪಿಸಿದ್ದರು.

Related posts

ಪುಂಜಾಲಕಟ್ಟೆ- ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ: ಕಚ್ಚಾವಸ್ತು ಪೂರೈಕೆದಾರರಿಂದ ನಾಗಪುರದಲ್ಲಿ ಪ್ರತಿಭಟನೆ – ರೂ.11.50 ಕೋಟಿ ಪಾವತಿಗೆ ಕಂಪೆನಿ ಒಪ್ಪಿಗೆ

Suddi Udaya

ಎಸ್.ಡಿ.ಎಮ್.ಪದವಿ ಪೂರ್ವ ಕಾಲೇಜಿನಲ್ಲಿ ಹಸಿರು ಹೊನ್ನು ಕಾರ್ಯಕ್ರಮ

Suddi Udaya

ಗೇರುಕಟ್ಟೆ: ಕಬಕದ ಇನೋವ ಕಾರು ಡಿಕ್ಕಿ: ಜೀವ ಉಳಿಸಿದ ಮಣ್ಣಿನ ದಿಣ್ಣೆ

Suddi Udaya

ವಾಣಿ ಪ.ಪೂ. ಕಾಲೇಜಿನ ರೋವರ್ಸ್ ತಂಡ ಜಿಲ್ಲಾ ಮಟ್ಟದ ಗೀತ ಗಾಯನ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ಕಳೆಂಜ ಕ್ರಿಶ್ಚಿಯನ್ ಬ್ರದರ್ಸ್ ಪ್ರಾಯೋಜಕತ್ವದಲ್ಲಿ ಸಿಬಿಕೆ ಕಪ್-2025 ರಾಷ್ಟ್ರಮಟ್ಟದ ಮುಕ್ತ ಹೊನಲು ಬೆಳಕಿನ ವಾಲಿಬಾಲ್ ಹಾಗೂ ಹಗ್ಗ ಜಗ್ಗಾಟ ಪಂದ್ಯಾಟ

Suddi Udaya

ಮುಂಡೂರು: ವಿಶ್ವನಾಥ ಪೂಜಾರಿ ನಿಧನ

Suddi Udaya
error: Content is protected !!