ಕೊಕ್ಕಡ: ಅಲ್ಲಲ್ಲಿ ಮರ ಬಿದ್ದು, ವಿದ್ಯುತ್, ಮನೆಗಳಿಗೆ ಹಾನಿ: ತಕ್ಷಣ ಸ್ಪಂದಿಸಿದ ಹರೀಶ್ ಪೂಂಜ

Suddi Udaya

Updated on:

ಕೊಕ್ಕಡ: ಬೆಳ್ತಂಗಡಿ ತಾಲೂಕಿನಾದ್ಯಂತ ಮೇ 11 ರಂದು ಸಂಜೆ ಬೀಸಿದ ಗಾಳಿ ಮಳೆಗೆ ಅಲ್ಲಲ್ಲಿ ಕೊಕ್ಕಡ ಗ್ರಾಮದಲ್ಲಿ ಮರ ಬಿದ್ದು, ಮನೆ, ಸೋತ್ತುಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ.

ಕೊಡಿಂಗೇರಿ ವಿಶ್ವನಾಥ ರವರ ಮನೆ ಬದಿ ಮಳೆಯಿಂದಾಗಿ ಕಾಪೌಂಡ್ ಜರಿದು ಹಾನಿಯಾಗಿ ರೂ. 2ಲಕ್ಷ ನಷ್ಟವಾಗಿದೆ.

ಹರೀಶ್ ಕೆಂಗುಡೆಲ್., ಕುಂಜಮ್ಮ, ಸಂದೀಪ್ ಕೊರಿಗದ್ದೆ, ಕೇಶವ ಹಳ್ಳಿಂಗೇರಿಯವರ ಮನೆ ಮೇಲ್ಛಾವಣಿ ಹಾನಿಯಾಗಿದೆ.

ಕೂಡಲೇ ಸ್ಪಂದಿಸಿದ ಶಾಸಕ ಹರೀಶ್ ಪೂಂಜರವರು ಪಂ. ಅಧ್ಯಕ್ಷರಾದ ಯೋಗೀಶ್ ಆಲಂಬಿಲರವರ ಮೂಲಕ ಹಾನಿಯಾದ ಮನೆಗಳ ರಿಪೇರಿಗೆ ಪೂರ್ತಿ ಆರ್ಥಿಕ ನೆರವುವನ್ನು ನೀಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಪವಿತ್ರಾ, ಸದಸ್ಯರಾದ ಪುರುಷೋತ್ತಮ, ಶ್ರೀಮತಿ ಲತಾ, ಬೂತ್ ಸಮಿತಿಯ ಅಧ್ಯಕ್ಷರು ಶ್ರೀನಾಥ್, ವಿನಯ್ ಹಾರ, ಕಾರ್ಯದರ್ಶಿ ಕಿಶೋರ್ ಕುತ್ಯೆ, ಕಾರ್ಯಕರ್ತ ಸೇಸಪ್ಪ ಮೂಲ್ಯ, ಮತ್ತಿತ್ತರ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Comment

error: Content is protected !!