ಜನಾರ್ಶೀವಾದದಿಂದ ಎರಡನೇ ಬಾರಿ ಶಾಸಕರಾಗಿ ಹರೀಶ್ ಪೂಂಜ ಆಯ್ಕೆ: ಕುತ್ಲೂರಿನಲ್ಲಿ ಕಾರ್ಯಕರ್ತರಿಂದ ಅದ್ಧೂರಿ ವಿಜಯೋತ್ಸವ

Suddi Udaya

ಕುತ್ಲೂರು:ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬೆಳ್ತಂಗಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಎರಡನೇ ಬಾರಿ ಮರು ಆಯ್ಕೆಯಾದ ಹರೀಶ್ ಪೂಂಜರವರ ಗೆಲುವಿನ ಸಂಭ್ರಮವನ್ನು ಕುತ್ಲೂರಿನಲ್ಲಿ‌ ಅದ್ಧೂರಿಯಾಗಿ ಆಚರಿಸಲಾಯಿತು.

ಗ್ರಾಮದ ಮೂಲೆ‌ ಮೂಲೆಗಳಿಗೆ ಬೈಕ್ ಮತ್ತು ವಾಹನ ಜಾಥಾ ಮೂಲಕ ಸಂಚರಿಸಿ ಅಲ್ಲಲ್ಲಿ ಪಟಾಕಿ ಸಿಡಿಸುವ ಮೂಲಕ ಸಂಭ್ರಮಿಸಲಾಯಿತು. 200 ಕ್ಕೂ ಹೆಚ್ಚು ಕಾರ್ಯಕರ್ತರು , ಶಾಸಕರ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಂಜೆ ಅಭಿಮಾನಿಗಳ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಆಶಾಲತ ರವರ ನಿವಾಸದಲ್ಲಿ ಭೋಜನ ಕೂಟ ಏರ್ಪಡಿಸಲಾಯಿತು

ಕಾರ್ಯಕ್ರಮದ ಉಸ್ತುವಾರಿಯನ್ನು ಸ್ಥಳೀಯ ಬಿಜೆಪಿ ನಾಯಕರಾದ ರಾಧಾಕೃಷ್ಣ ಹೆಗ್ಡೆ ,ರಾಮಚಂದ್ರ ಭಟ್ , ಸಂತೋಷ್ ಪೂಜಾರಿ ಮರ್ದೊಟ್ಟು ವಹಿಸಿದ್ದರು.

Leave a Comment

error: Content is protected !!