38.6 C
ಪುತ್ತೂರು, ಬೆಳ್ತಂಗಡಿ
March 6, 2026
ವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಲಾಯಿಲ ಪ್ರಸನ್ನ ಪ.ಪೂ. ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ಫೌಂಡೇಶನ್‌ ತರಗತಿ ಆರಂಭ

ಲಾಯಿಲ: ಪ್ರಸನ್ನ ಪಿ.ಯು ಕಾಲೇಜು ಇದರ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾಥಿ೯ಗಳಿಗೆ ಫೌಂಡೇಶನ್‌ ತರಗತಿಯನ್ನು ಮೇ 15 ರಂದು ಆರಂಭಿಸಲಾಯಿತು.

ಕಾಯ೯ಕ್ರಮದ ಉದ್ಘಾಟನೆಯನ್ನು ಕಾಲೇಜಿನ ಅಧ್ಯಕ್ಷ ಗಂಗಾಧರ ಗೌಡರು ನೆರವೇರಿಸಿದರು. ಹಾಗೆಯೇ ವಿದ್ಯಾಥಿ೯ಗಳಿಗೆ ಶುಭಹಾರೈಸಿದರು. ಅಲ್ಲದೆ ಶಿಕ್ಷಣದ ಮಹತ್ವವನ್ನು ವಿದ್ಯಾಥಿ೯ಗಳಿಗೆ ಮನದಟ್ಟುವಾಗುವಂತೆ ಹೇಳಿ ಇವತ್ತಿನ ಸ್ಪಧಾ೯ತ್ಮಕ ಜಗತ್ತಿಗೆ ಅಗತ್ಯವಿರುವ ತರಬೇತಿಯ ಬಗ್ಗೆ ವಿವರಿಸಿದರು.

ಕಾಯ೯ಕ್ರಮದ ಮುಖ್ಯ ಅತಿಥಿಯಾದ ಶ್ರಾವಣಿ ಮತ್ತು ಪ್ರಾಥ೯ನ ವಿದ್ಯಾ ಸಂಸ್ಥೆ ಜಗಳೂರು ಇಲ್ಲಿನ ಅಧ್ಯಕ್ಷೆ ಶ್ರೀಮತಿ ನಾಗರತ್ನರವರು ವಿದ್ಯಾಥಿ೯ಗಳು ಈ ಸಂಸ್ಥೆಯಲ್ಲಿ ಉತ್ತಮ ಶಿಕ್ಷಣ ಪಡೆದು ದೇಶದ ಉತ್ತಮ ಪ್ರಜೆಗಳಾಗಿ ಎಂದು ಶುಭ ಹಾರೈಸಿದರು.

ಹಾಗೆಯೇ ಎ ಎ ಅಕಾಡೆಮಿಯ ಕಾಯ೯ದಶಿ೯ಯಾದ ಅನಿಲ್‌ ಕುಮಾರ್‌ಎಂ ನೀಟ್, ಜೆಇಇ, ಸಿಇಟಿಯ ತರಬೇತಿಯ ಬಗ್ಗೆ ಸ್ಪುಟವಾಗಿ ವಿವರಿಸಿದರು. ವೇದಿಕೆಯಲ್ಲಿ ಎ ಎ ಅಕಾಡೆಮಿ ಇದರ ನಿದೇ೯ಶಕರಾದ ಅಣ್ಣೇಶ್‌ ಕೆ ಎಚ್, ಸಂಸ್ಥೆಯ ಆಡಳಿತಾಧಿಕಾರಿ ಕೃಪಾ ಆರ್‌ ಉಪಸ್ಥಿತರಿದ್ದರು.

ಪ್ರಾಚಾಯ೯ರಾದ ಚಂದ್ರಶೇಖರ ಗೌಡರವರು ಸ್ವಾಗತಿಸಿ ಹಾಗೆಯೇ ಪ್ರಾಸ್ತಾವಿಕ ಭಾಷಣ ಮಾಡಿದರು. ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಅಂಬು ಕುಮಾರ್‌ ಧನ್ಯವಾದವಿತ್ತರು.

Related posts

ಸಮಾಜ ಸೇವಕ ಡಾ.ರವಿ ಪೂಜಾರಿ ಕಕ್ಕೆಪದವುರವರಿಗೆ ಒಳಿದು ಬಂದ ಸಮಾಜ ರತ್ನ ಪ್ರಶಸ್ತಿ

Suddi Udaya

ಪುಂಜಾಲಕಟ್ಟೆ  ಕರ್ನಾಟಕ ಪಬ್ಲಿಕ್ ಶಾಲೆ : ಶಾಲಾ ಪ್ರಾರಂಭೋತ್ಸವ

Suddi Udaya

ಜ.28 ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ರಕ್ತೇಶ್ವರಿ ಮತ್ತು ಪಂಜುರ್ಲಿ ದೈವಗಳ ಪ್ರತಿಷ್ಠಾಪನೆ: ಫೆ.2 ರಂದು ದೈವಗಳ ನರ್ತನ ಸೇವೆ

Suddi Udaya

ಧರ್ಮಸ್ಥಳ: ಬೊಳಿಯಾರ್ ನಲ್ಲಿ ಒಂಟಿ ಸಲಗ ಪ್ರತ್ಯಕ್ಷ: ಅಪಾಯದಿಂದ ಪಾರಾದ ಮಕ್ಕಳು

Suddi Udaya

ಕಳೆಂಜ: ಕೊತ್ತೋಡಿ ನಿವಾಸಿ ಸುಂದರ ಗೌಡ ನಿಧನ

Suddi Udaya

ಪಡಂಗಡಿ: ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶರನ್ನವರಾತ್ರಿ ಪ್ರಯುಕ್ತ ಚಂಡಿಕಾ ಹೋಮ

Suddi Udaya
error: Content is protected !!